Friday 21 December 2018
Thursday 20 December 2018
ಹುಚ್ಚು ಖೋಡಿ ಮನಸು -೧೩
ಮುಗಿಲ ಎದೆಯಲ್ಲಿ ತಲೆಯನಿಟ್ಟು
ಭೋರೆಂದು ಅಳಬೇಕೆನಿಸಿತ್ತು..
ಕರಿಮೋಡವೊಂದು ನನಗೆ ಮರುಗಿ
ಕಂಬನಿಯ ತುಂತುರು ಹನಿಸಿತ್ತು..
ನನ್ನ ಗೋರಿ ನಾನೇ ಬಗೆದು
ಅಲ್ಲೇ ತಣ್ಣಗೆ ಮಲಗಬೇಕೆನಿಸಿತ್ತು..
ನೀನಿಲ್ಲದ ಜೀವ-ಜೀವನ ಸಾಕೆನಿಸಿತ್ತು.
ಸತ್ತ ಕನಸುಗಳ ಹೆಣ..ಕೊಳೆತು ನಾರುತ್ತಿತ್ತು
ಇಷ್ಟು ದಿನಗಳ ಕಾಲ ನೀನಿಲ್ಲದ ಬದುಕು
ಸವೆಸಿದ್ದಕ್ಕೆ , ನನ್ನ ಮೇಲೆಯೇ ಜಿಗುಪ್ಸೆ!
ಹೋಗಲಿ ಬಿಡು ಬಂಗಾರ...
ನೀ ಬಿಟ್ಟುಹೋದ ನೆನಪುಗಳನ್ನೇ
ನೆಟ್ಟು ನೀರೆರೆದು,ಬೆಳೆಸಿ, ಅದರ ಬುಡದಲ್ಲೇ
ಕೊನೆಯ ಕನಸ ಹೂ ಅರಳಿಸುತ್ತೇನೆ.
ಈ ಜಲುಮಕ್ಕೆ ಅಷ್ಟು ಸಾಕು ಬಿಡು!
ಕನವರಿಸಿತ್ತು ನೋಡು ಅರ್ಧಜೀವದ ಕನಸು
ಏನಂದೀತು ಕೇಳು ನಿನ್ನ ಹುಚ್ಚು ಖೋಡಿ ಮನಸು!
ಭೋರೆಂದು ಅಳಬೇಕೆನಿಸಿತ್ತು..
ಕರಿಮೋಡವೊಂದು ನನಗೆ ಮರುಗಿ
ಕಂಬನಿಯ ತುಂತುರು ಹನಿಸಿತ್ತು..
ನನ್ನ ಗೋರಿ ನಾನೇ ಬಗೆದು
ಅಲ್ಲೇ ತಣ್ಣಗೆ ಮಲಗಬೇಕೆನಿಸಿತ್ತು..
ನೀನಿಲ್ಲದ ಜೀವ-ಜೀವನ ಸಾಕೆನಿಸಿತ್ತು.
ಸತ್ತ ಕನಸುಗಳ ಹೆಣ..ಕೊಳೆತು ನಾರುತ್ತಿತ್ತು
ಇಷ್ಟು ದಿನಗಳ ಕಾಲ ನೀನಿಲ್ಲದ ಬದುಕು
ಸವೆಸಿದ್ದಕ್ಕೆ , ನನ್ನ ಮೇಲೆಯೇ ಜಿಗುಪ್ಸೆ!
ಹೋಗಲಿ ಬಿಡು ಬಂಗಾರ...
ನೀ ಬಿಟ್ಟುಹೋದ ನೆನಪುಗಳನ್ನೇ
ನೆಟ್ಟು ನೀರೆರೆದು,ಬೆಳೆಸಿ, ಅದರ ಬುಡದಲ್ಲೇ
ಕೊನೆಯ ಕನಸ ಹೂ ಅರಳಿಸುತ್ತೇನೆ.
ಈ ಜಲುಮಕ್ಕೆ ಅಷ್ಟು ಸಾಕು ಬಿಡು!
ಕನವರಿಸಿತ್ತು ನೋಡು ಅರ್ಧಜೀವದ ಕನಸು
ಏನಂದೀತು ಕೇಳು ನಿನ್ನ ಹುಚ್ಚು ಖೋಡಿ ಮನಸು!
Subscribe to:
Posts (Atom)
ಜನ-ಜಾಣತನ
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
-
ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವ...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...
-
ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು! ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧ...