Tuesday 24 October 2023

ವ್ಯಂಗ್ಯ ಮಾಡಬೇಡಿ - ಭಾರತಾಂಬೆಯನ್ನು!!

 ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ.

ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ


ಸಂದರ್ಭದಲ್ಲಿ ನೆಲೆಯನ್ನೂ,ನೆಲವನ್ನೂ ಕಳೆದುಕೊಳ್ಳುತ್ತಿರುವ ಕಷ್ಟಕುಲದವರನ್ನು ನಾವು ಅರ್ಥಮಾಡಿಕೊಳ್ಳದೇ ಹೋದರೆ,ನಮ್ಮೂರು ನಮಗೆ ಅರ್ಥವಾಗುವುದಿಲ್ಲ.ಹಳ್ಳಿಗಳು ಅರ್ಥವಾಗದೆ ಭಾರತವೂ ಅರ್ಥವಾಗುವುದಿಲ್ಲ..!

ಹಾಗಾಗಿಯೇ ಈ "ಗ್ಯಾರೆಂಟೀ"ಗಳು, ಶ್ರಮಿಕ ವರ್ಗದವರನ್ನು ಸೆಳೆದದ್ದು. 


ಮಲ್ಯ ,ನೀರವ್ ಮೋದಿ,ಚೋಕ್ಸಿಯಂಥವರ ಸಾವಿರಾರು ಕೋಟಿಗಳ ಉಂಡೆನಾಮದ ಬಗ್ಗೆಯೂ ಮಾತಾಡಬೇಕು. ಅದಾನಿ,ಅಂಬಾನಿಯವರ ದಿಢೀರನೆ ಸಂಪತ್ತು ಹೆಚ್ಚಿದ್ದರ ಬಗ್ಗೆಯೂ..!


ಇರಲಿ ಬಿಡಿ.. ದೇಶದ ಸಂಪತ್ತನ್ನು ಬಡವರೂ ಕೆಲಕಾಲ ತಿನ್ನಲಿ. ಅದು ಬಿಟ್ಟಿ ,ಪುಕ್ಸಟ್ಟೆ ಅಂದುಕೊಂಡವರ ಸಂವೇದನೆ ಸತ್ತಿದೆ ಅಷ್ಟೇ.

ಈ ಮರ, ಮಾರಕವಾದ ಕಾರ್ಬನ್ ಡೈಆಕ್ಸೈಡ್ ಹೀರಿ,ನಮ್ಮ ಜೀವ ವಾಯುವಾದ ಆಕ್ಸಿಜನ್ ಕೊಟ್ಟಂತೆ, ಸರಕಾರಗಳೂ ಕೂಡ,ಉಳ್ಳವರ ಸಂಪತ್ತಿನ ಕೆಲ ಭಾಗವನ್ನು ಇಲ್ಲದವರಿಗೆ ಹಂಚಬೇಕು. ಅದೇ "ಸಮಾಜವಾದ"! ವಾಸ್ತವವಾಗಿ ಅತೀ ಹೆಚ್ಚು ದುಡಿಯುವುದು ಸಮಾಜದ ತಳಶ್ರೇಣಿಯೇ! ಸರ್ಕಾರದ ಸವಲತ್ತುಗಳನ್ನು ಅನುಭವಿಸುವುದು ಮಾತ್ರ ಕಾರ್ಪೊರೇಟ್ ಧಣಿಗಳಾಗಬೇಕೇಕೆ! ನೆನಪಿಡಿ..ಈ ಭಾರತದ ಭೂಮಿಗೆ ಸುರಿವ ಬಡವರ ಬೆವರಿನ ಪ್ರತೀ ಹನಿಯೂ..ಅವನು ಕಟ್ಟುವ ಟ್ಯಾಕ್ಸ್!

ನಮ್ಮ ತಿಳುವಳಿಕೆಗಳೂ ಸಹ ಅಪ ಡೇಟ್ ಆಗಬೇಕಾದುದೂ ಹೀಗೆಯೇ! 


ಅನ್ನಭಾಗ್ಯವನ್ನು ಕೇವಲವಾಗಿ ಕಾಣಬೇಡಿ. ಫ್ರೀಯಾಗಿ ಕೆಂಪು ಬಸ್ ಹತ್ತುವುದು ತಾಯಿ ಭಾರತಾಂಬೆ! ವ್ಯಂಗ್ಯ ಮಾಡಬೇಡಿ. 

ರಾಜಕಾರಣ... ನಮ್ಮ ಮನುಷ್ಯತ್ವವನ್ನು ನಾಶ ಮಾಡುವಂತಾಗಬಾರದು!

1 comment:

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...