Saturday 23 March 2019

ನಮೋಸ್ತುತೆ

ಮೂಕವಾಗಿದೆ ಕಾಲ, ಈ ಕಾಲ ಬಳಿಯಲ್ಲಿ
ಹಗುರವಾಗಿದೆ ಚಿಂತೆಯ ಭೂಭಾರವಿಲ್ಲಿ!
ಸೃಷ್ಟಿಕರ್ತನೇ ಬಾಗಿ ಕೈ ಮುಗಿದ, ನೋಡಿಲ್ಲಿ!
ಗೆಜ್ಜೆದನಿ ಆಲಿಸಲು ಪ್ರಕೃತಿಯೇ ಮೌನವಿಲ್ಲಿ..

ಅಕ್ಷರಗಳ ಹಂಗಿಲ್ಲದೆ ಮೂಡುತ್ತಿದೆ ಕವಿತೆ
ಕಾರಣವೇ ಇಲ್ಲದೆ ಉಕ್ಕಿದೆ ಆನಂದದ ಧನ್ಯತೆ
ಮಗುವೇ ನಿನ್ನ ಪಾದಗಳಿಗೆ ನಮೋ ನಮೋಸ್ತುತೆ!


ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...