Wednesday 12 June 2019

ಸೇವೆಯ ಮಿಡಿತ

ತಾನು ಬೆಂದು ಇರುಳ ಬೆಳಗುವ
ದೀಪದ್ದು - ಒಂದು ಘನತೆಯ ಸಾವು!
ಹೆಣದ ಮೇಲಿಟ್ಟರೂ ಕ್ಷಣ ಹೊತ್ತಾದರೂ
ಕಂಪು ಸೂಸಿಯೇ ಸಾಯುತ್ತದೆ - ಹೂವು!
ತನ್ನ ಕಂದನ ಪಾಲಿನ ಕೆಚ್ಚಲ ಹಾಲನ್ನು
ಕಸಿದು ಕರೆದರೂ- ಹಸುವಿಗಿಲ್ಲ ನೋವು!

ಯಾರಿಗೋಸ್ಕರ ಈ ಮಾವು-ಬೇವು?
ಯಾರಿಗೆ ಆ ಕೋಳಿ ಕೊಡುವ ಮರಿ-ಕಾವು?
ತೆನೆಯ ಜೋಳ ಸೇರುವುದಾದರೂ ಯಾರ ಹಗೇವು?
ಕೊಟ್ಟಿತೇನು ಜೇನ ಹೊಟ್ಟು ಜೇನ ಬದಲು ಕೀವು?
ಇಷ್ಟಕ್ಕೂ ಹಾಕಿದ್ದರಾದರೂ ಯಾರು ಅವಕ್ಕೆ ಮೇವು?
ಯೋಚಿಸಬೇಕಿದೆ..ಒಮ್ಮೆಯಾದರೂ ನಾವು-ನೀವು!
ಮತ್ತೊಂದು ಜೀವಕ್ಕೆ ಮಿಡಿಯದ ಜೀವನ‌ - ನಿತ್ಯ ಸಾವು!
ಇದೇ "ಹೆಜ್ಜೆ ಮೂಡದ ಹಾದಿಯ" ಠರಾವು!






Friday 7 June 2019

"ಹೆಜ್ಜೆ ಮೂಡದ ಹಾದಿ"

ಹಾದಿಯ ಹಂಗಿಲ್ಲ.....ಹಾಡಿನದ್ದೇ ಗುಂಗು!!
ಸಾವಿನೆಡೆ ನಿರ್ಲಿಪ್ತ....ಬದುಕು ಸಂತೃಪ್ತ
ಅಪ್ಪನಿಲ್ಲ , ಮಗನಿಲ್ಲ...ಭಾರವಿಲ್ಲದ ಹೆಗಲು
ಗಮ್ಯವಿಲ್ಲ ,ಗಾಬರಿಯಿಲ್ಲ...ಸರಾಗ ನನ್ನ ಹಗಲು
ಕಾಡಲಿಕ್ಕೆ ಒಂದಷ್ಟು ಕನಸುಗಳಿವೆ!
ಅಲ್ಲಿ ಯಾರದ್ದೋ ಎದೆಯಲ್ಲಿ ಬಿಟ್ಟ ನೆನಪುಗಳಿವೆ!
ಜಗತ್ತಿನ ಸಂಭವ-ಅಸಂಭವಗಳು ಏನಾದರೂ ಆಗಲಿ!
ಆರ್ತ ಜೀವಗಳಿಗೆ ಮರುಗುವ ಮನಸು ನನಗಿರಲಿ!
ಕಾಲ-ಕಾಲು ಕರೆದಲ್ಲಿ ಸಾಗುತ್ತೇನೆ;
ಅದೇ ನನಗೆ ನಿತ್ಯ ಯುಗಾದಿ!
ತೇಕು ಬಂದೆಡೆಯಲ್ಲಿ ನಿಲ್ಲಿಸುತ್ತೇನೆ
ನನ್ನ "ಹೆಜ್ಜೆ ಮೂಡದ ಹಾದಿ"!!





ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...