Wednesday 7 March 2018

ನನ್ನೊಲವಿಗೆ....

ನಾನು ಬೀಜ ಬಿತ್ತುವ
ರೈತನಾಗುತ್ತೇನೆ
ನೀನು ಫಲ ಕೊಡುವ
ಭೂಮಿಯಾಗು
ಇಬ್ಬರ ಬೆವರಿನಲ್ಲಿ
ಹುಟ್ಟಲಿ ಬಿಡು..ಸಣ್ಣ ಹೊಳೆ
ನಮ್ಮ ಮಕ್ಕಳು
ಕಾಗದದ ದೋಣಿ ಬಿಡಲಿ!!!
ನಾನು ಬದುವಿನಲ್ಲಿ
ದೊಡ್ಡ ಮರವಾಗುತ್ತೇನೆ
ನೀನು ತಬ್ಬಿ ಬೆಳೆವ
ಹೂವಿನ ಬಳ್ಳಿಯಾಗು..
ನಮ್ಮ ಮಕ್ಕಳು
ಹೂವ ಘಮಲಿನಲ್ಲಿ
ಮರದ ನೆರಳಿನಲ್ಲಿ
ತಣ್ಣಗೆ ಮಲಗಲಿ ಬಿಡು!!
ನಾನು ಬಿಸಿಲಾದರೆ
ನೀನು ನೆರಳಾಗು
ನಾನು ಗುಡುಗಾದರೆ
ನೀನು ಮಳೆಯಾಗು
ಚಿಟ್ಟೆಯಾಗಿಬಿಡು
ಬೆಳೆಗಳ ಪರಾಗಸ್ಪರ್ಷಕ್ಕೆ
ಹಕ್ಕಿಯಾಗುತ್ತೇನೆ
ತೆನೆ ತಿನ್ನುವ ಕೀಟದ ಬೇಟಕ್ಕೆ
ಮಾಡುವ ಬಾ ಒಲವೇ
ಕೊಯಿಲಾದ ನಮ್ಮೆಲ್ಲ
ಕನಸುಗಳ ದೊಡ್ಡ ರಾಶಿ...!!
ಅದೆ ಬದುಕಿನ ಪರಮ ಖುಶಿ!!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...