Monday 2 July 2018

ಹುಚ್ಚು ಖೋಡಿ ಮನಸು - ೧೨

ನಾನು ಬರೆದದ್ದನ್ನು ಓದುವ ಜೀವ ಜೀವಾಳವೇ...
ನಮ್ಮ ಮಧ್ಯೆ ಹರಿದಾಡಿದ ಅಕ್ಷರಗಳ ಲೆಕ್ಕ
ನಿನ್ನ ಮೌನಕ್ಕೂ ಹಾಕಿಟ್ಟಿದ್ದೇನೆ ಬಿಡು ತೂಕ!
ಎಷ್ಟು ಸಲ ತುಟಿ ಕಚ್ಚಿ ತಡೆದಿದ್ದೆ ಹೇಳು ಬಿಕ್ಕ?
ಕೊಂದಿದ್ದ ಕಾಲವೆಷ್ಟು? ಹೇಳಲಿಲ್ಲ ಯಾಕ?

ಸಾವಿಗೂ ಸಮಾಧಾನ ಮಾಡುತ್ತಿದ್ದೆ
ಕತ್ತಲನ್ನೂ ಬಿಡದೆ ಹತ್ತಿರ ಕರೆಯುತ್ತಿದ್ದೆ
ಕಾರಣಗಳೇ ಇಲ್ಲದೆ ನಕ್ಕಿದ್ದಕ್ಕೆ
ದಾರುಣವಾಗಿ ಬಿಕ್ಕಿ ಅತ್ತಿದ್ದಕ್ಕೆ
ಕಂದಾಯ ಕಟ್ಟಲೇಬೇಕಿದೆಯಲ್ಲವೇ ಕಾಲಕ್ಕೆ?

ಈಗಲೂ ಬೀಳುತ್ತವೆ ಬಿಡು,
ರಾತ್ರಿ ಮಲಗಿದಾಗ ಕೆಲ ಅರ್ಥವಾಗದ ಕನಸು!
ಆಗಾಗ ಕಳಿಸುತ್ತಿರುತ್ತೇನೆ ಹೀಗೆ
ತೆರೆದು ನೋಡು ನಿನ್ನ ಹುಚ್ಚು ಖೋಡಿ ಮನಸು!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...