Monday 27 July 2020

'ಹಂಬಲ'



ಆ ಸಾವಿನ ಹಂಬಲ ನೀಡುವ ನಶೆ
ಬದುಕಿನ ಬಟ್ಟಲಿನಲ್ಲಿಲ್ಲ ನೋಡು!
ಹುಟ್ಟುವಾಗಿನ ಮಗುವಿನ ಅಳುವಿಗೂ
ಸಾಯುವಾಗಿನ ಹೆಣದ ನಗುವಿಗದೆಷ್ಟು ಫರಕು!
ಮುಖವಾಡದ ಬದುಕು,ಸಾವಿನ ಮುಂದೆ ಸೋಲಬೇಕು!
ಉಟ್ಟ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದರೂ
ಬೆತ್ತಲೆ ಎನಿಸುವುದೇ ಇಲ್ಲ, ಎಷ್ಟಿವೆಯೋ ಕೃತ್ರಿಮದ ಪದರು?
ಇಲ್ಲಿ ನಗುವಿಗೂ ಒಂದು ಬೆಲೆ,ಅಳುವೂ ಮಾರಾಟದ ಸರಕೇ!
ಸಂಬಂಧಗಳಿಗೊಂದೊಂದು ಬ್ರಾಂಡು,ನೀಟಾದ ಪ್ಯಾಕು!ಹೂಗಳರಳಿದರೆ ಕಂಪಿಲ್ಲ, ಹಕ್ಕಿ ಹಾಡಿದರೆ ಇಂಪಿಲ್ಲ.
ಸುರಿವ ಪುನರ್ವಸು ಮಳೆಯಲ್ಲೇಕೆ ಕಣ್ಣೀರಿನ ಉಪ್ಪು?
ಆಷಾಢದ ತುಂಟ ಗಾಳಿಯಲ್ಲೂ ದೀರ್ಘ ನಿಟ್ಟುಸಿರು!
ಸೋಮಾರಿ ಸೂರ್ಯನ ಬಿಸಿಲು ಮಾತ್ರ ಹೆಣ ಸುಡುವ ಚಿತೆ!
ಮಾತುಗಳನ್ನೆಲ್ಲ ಕೊಲ್ಲಬೇಕು,ಸಾಯುವ ಮೊದಲು.
ಮೌನವನ್ನೂ ಆಚೆಗೆ ಅಟ್ಟಬೇಕು ಎಲ್ಲಕ್ಕೂ ಮೊದಲು.
ಖಾಲಿಯಾಗಬೇಕು,ನಿಸ್ಸಾರವಾಗಬೇಕು,ನಿರ್ಮೋಹಿಯಾಗಬೇಕು.
ಮತ್ತು....
ನಾನಾಗಬೇಕು..ಸಾವಾಗಬೇಕು..ಸಾವಿನ ನಿಃಶಬ್ಧವಾಗಬೇಕು
!





No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...