Monday, 27 July 2020
'ಹಂಬಲ'
ಆ ಸಾವಿನ ಹಂಬಲ ನೀಡುವ ನಶೆ
ಈ ಬದುಕಿನ ಬಟ್ಟಲಿನಲ್ಲಿಲ್ಲ ನೋಡು!
ಹುಟ್ಟುವಾಗಿನ ಮಗುವಿನ ಅಳುವಿಗೂ
ಸಾಯುವಾಗಿನ ಹೆಣದ ನಗುವಿಗದೆಷ್ಟು ಫರಕು!
ಮುಖವಾಡದ ಬದುಕು,ಸಾವಿನ ಮುಂದೆ ಸೋಲಬೇಕು!
ಉಟ್ಟ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದರೂ
ಬೆತ್ತಲೆ ಎನಿಸುವುದೇ ಇಲ್ಲ, ಎಷ್ಟಿವೆಯೋ ಕೃತ್ರಿಮದ ಪದರು?
ಇಲ್ಲಿ ನಗುವಿಗೂ ಒಂದು ಬೆಲೆ,ಅಳುವೂ ಮಾರಾಟದ ಸರಕೇ!
ಸಂಬಂಧಗಳಿಗೊಂದೊಂದು ಬ್ರಾಂಡು,ನೀಟಾದ ಪ್ಯಾಕು!ಹೂಗಳರಳಿದರೆ ಕಂಪಿಲ್ಲ, ಹಕ್ಕಿ ಹಾಡಿದರೆ ಇಂಪಿಲ್ಲ.
ಸುರಿವ ಪುನರ್ವಸು ಮಳೆಯಲ್ಲೇಕೆ ಕಣ್ಣೀರಿನ ಉಪ್ಪು?
ಆಷಾಢದ ತುಂಟ ಗಾಳಿಯಲ್ಲೂ ದೀರ್ಘ ನಿಟ್ಟುಸಿರು!
ಸೋಮಾರಿ ಸೂರ್ಯನ ಬಿಸಿಲು ಮಾತ್ರ ಹೆಣ ಸುಡುವ ಚಿತೆ!
ಮಾತುಗಳನ್ನೆಲ್ಲ ಕೊಲ್ಲಬೇಕು,ಸಾಯುವ ಮೊದಲು.
ಮೌನವನ್ನೂ ಆಚೆಗೆ ಅಟ್ಟಬೇಕು ಎಲ್ಲಕ್ಕೂ ಮೊದಲು.
ಖಾಲಿಯಾಗಬೇಕು,ನಿಸ್ಸಾರವಾಗಬೇಕು,ನಿರ್ಮೋಹಿಯಾಗಬೇಕು.
ಮತ್ತು....
ನಾನಾಗಬೇಕು..ಸಾವಾಗಬೇಕು..ಸಾವಿನ ನಿಃಶಬ್ಧವಾಗಬೇಕು!
Subscribe to:
Post Comments (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...

-
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೆಲವೊಂದು ಸಿನಿಮಾಗಳು, ಇಡೀ ಮನಸ್ಸನ್ನು ಆವರಿಸಿಬಿಡುತ್ತವೆ. ಬಹುಕಾಲ ಕಾಡುತ್ತಲೇ ಇರುತ್ತವೆ. ತಲ್ಲಣಗಳನ್ನು ಎಬ್ಬಿಸಿ,ಆಳವನ್ನು ತಾಕುತ್ರವೆ. ನಾನು ತುಂಬಾ ಹಚ್ಚಿಕೊಂಡ...
-
ಕವಿತೆಯೇ... ನೀನೀಗ ನನಗೆ ಮಜಾ ಅಲ್ಲ. ನೀನೇನು ನನಗೆ ಖಯಾಲಲ್ಲ. ನಿನ್ನನ್ನೇನು ನೂರು ಜನ ಓದಬೇಕಿಲ್ಲ. ಓದಿದವರೆಲ್ಲ ನನಗೆ ಹೇಳುವ ಭೋಪರಾಕುಗಳಿಂದ ಆಗಬೇಕಾದ್ದೇನಿಲ್ಲ. ನ...
No comments:
Post a Comment