Monday 27 July 2020
'ಹಂಬಲ'
ಆ ಸಾವಿನ ಹಂಬಲ ನೀಡುವ ನಶೆ
ಈ ಬದುಕಿನ ಬಟ್ಟಲಿನಲ್ಲಿಲ್ಲ ನೋಡು!
ಹುಟ್ಟುವಾಗಿನ ಮಗುವಿನ ಅಳುವಿಗೂ
ಸಾಯುವಾಗಿನ ಹೆಣದ ನಗುವಿಗದೆಷ್ಟು ಫರಕು!
ಮುಖವಾಡದ ಬದುಕು,ಸಾವಿನ ಮುಂದೆ ಸೋಲಬೇಕು!
ಉಟ್ಟ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆದರೂ
ಬೆತ್ತಲೆ ಎನಿಸುವುದೇ ಇಲ್ಲ, ಎಷ್ಟಿವೆಯೋ ಕೃತ್ರಿಮದ ಪದರು?
ಇಲ್ಲಿ ನಗುವಿಗೂ ಒಂದು ಬೆಲೆ,ಅಳುವೂ ಮಾರಾಟದ ಸರಕೇ!
ಸಂಬಂಧಗಳಿಗೊಂದೊಂದು ಬ್ರಾಂಡು,ನೀಟಾದ ಪ್ಯಾಕು!ಹೂಗಳರಳಿದರೆ ಕಂಪಿಲ್ಲ, ಹಕ್ಕಿ ಹಾಡಿದರೆ ಇಂಪಿಲ್ಲ.
ಸುರಿವ ಪುನರ್ವಸು ಮಳೆಯಲ್ಲೇಕೆ ಕಣ್ಣೀರಿನ ಉಪ್ಪು?
ಆಷಾಢದ ತುಂಟ ಗಾಳಿಯಲ್ಲೂ ದೀರ್ಘ ನಿಟ್ಟುಸಿರು!
ಸೋಮಾರಿ ಸೂರ್ಯನ ಬಿಸಿಲು ಮಾತ್ರ ಹೆಣ ಸುಡುವ ಚಿತೆ!
ಮಾತುಗಳನ್ನೆಲ್ಲ ಕೊಲ್ಲಬೇಕು,ಸಾಯುವ ಮೊದಲು.
ಮೌನವನ್ನೂ ಆಚೆಗೆ ಅಟ್ಟಬೇಕು ಎಲ್ಲಕ್ಕೂ ಮೊದಲು.
ಖಾಲಿಯಾಗಬೇಕು,ನಿಸ್ಸಾರವಾಗಬೇಕು,ನಿರ್ಮೋಹಿಯಾಗಬೇಕು.
ಮತ್ತು....
ನಾನಾಗಬೇಕು..ಸಾವಾಗಬೇಕು..ಸಾವಿನ ನಿಃಶಬ್ಧವಾಗಬೇಕು!
Subscribe to:
Post Comments (Atom)
ಜನ-ಜಾಣತನ
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
-
ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವ...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...
-
ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು! ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧ...
No comments:
Post a Comment