Tuesday 19 May 2020

ಕ್ವೇರಂಟೀನ್ ಕವಿತೆಗಳು - ೦೩

ಕುಂತಿದ್ದಳು ನೋಡಾ...

ಸಾಲಲಿ ಮುಂದೆ, ಭಾರತಾಂಬೆ!!
ಬಾಗಿದ ನಡು,ಬತ್ತಿದ ಕಣ್ಣು..
ಎದೆಯಲ್ಲಿ ಕೀವು ಸುರಿವ ಹುಣ್ಣು!
ಕಾಲು-ತಲೆಯ ಮೇಲೆ ಧೂಳು-ಮಣ್ಣು!!

ಹೊಟ್ಟೆ ಹಸಿದಿದೆ, ಕೇಳುವರಾರು?
ಬದುಕು ಕುಸಿದಿದೆ, ನೋಡುವರಾರು?
ಸನಾತನೆಯಂತೆ,ಧೀರೆಯಂತೆ..ದೈನೇಸಿಯಾಗಿದ್ದಳು.
ಅನ್ನಪೂರ್ಣೆಯಂತೆ,ಆದಿತ್ಯೆಯಂತೆ..ಕೈಯೊಡ್ಡಿದ್ದಳು!!

ಅದೇನೋ ರೋಗವಂತೆ, ಭಿಕ್ಷೆ ಬೇಡಬಾರದಂತೆ!
ಮಾಸ್ಕು ಹಾಕಿಕೊಳ್ಳಬೇಕಂತೆ, ದೂರ ನಿಲ್ಲಬೇಕಂತೆ!
ಹೊಟ್ಟೆಗೆ ಹಾಕುವ ಮಾಸ್ಕುಗಳಿಲ್ಲವೇ?ಹಸಿವ‌ ಮುಚ್ಚಲು?
ಹಸಿವಿಗಿಂತ ಭೀಕರ ರೋಗ ಯಾವುದಿದೆಯಂತೆ?
ಈ ಶತಕೋಟಿ ಮಕ್ಕಳ ತಾಯಿಯ ಅದೇ ಹಳೆಯ ಪ್ರಶ್ನೆ!!

ತಲೆ ನರೆತ ಈ ಬಡಕಲು ಮುದುಕಿಗೆ
ಅದೆಂಥ ಜೀವನಪ್ರೀತಿ ನೋಡು!
ಇನ್ನೂ ಹಡೆಯುತ್ತಲೇ ಇದ್ದಾಳೆ, ಅಗಣಿತ ಪಾಪ ಸಂಕುಲವ!
ಜಾತಿ-ಧರ್ಮ,ಪಂಥ-ಪಂಗಡಗಳ ತೊಟ್ಟಿಲಿಗೆ ಹಾಕಿ..
ಅದೇನೋ ಸಂವಿಧಾನದ ಜೋಗುಳ ಹಾಡುತ್ತಿದ್ದಾಳೆ!
ಅರ್ಥ ಮಾಡಿಕೊಂಡ ಕೂಸುಗಳಿಗೆ ಸುಖದ ನಿದ್ದೆ!
ಆಗದಿದ್ದವುಗಳ ರಚ್ಚೆಗೆ ಹೈರಾಣಾಗಿದ್ದಾಳೆ ಪಾಪದ ಮುದುಕಿ!



1 comment:

  1. "ಹೊಟ್ಟೆಗೆ ಹಾಕುವ ಮಾಸ್ಕುಗಳಿಲ್ಲವೇ?ಹಸಿವ‌ ಮುಚ್ಚಲು?"
    ಈ ಸಾಲು ಮಾತನಾಡುತ್ತದೆ...

    ReplyDelete

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...