Saturday 2 September 2017

"ಆಹ್ವಾನ"




ಚಿತ್ತಭಿತ್ತಿಯ ತುಂಬ
ನಿನ್ನದೇ ಚಿತ್ತಾರ
ಕೆತ್ತಿರುವೆ ಹುಡುಗೀ...
ಉಬ್ಬು ತಗ್ಗುಗಳವು
ಅಳತೆ ಮೀರಿ ಮೂಡಿಹವು
ಸರಿಪಡಿಸು ಬಾರೇ...
ನೀ ಕೇಳಿದ್ದೆ ಕೊಡುವೆ!

ಎದೆಯ ಬಾಂದಳವ
ಗುಡಿಸಿ ಸಾರಿಸಿಕೊಂಡು
ಹೂಹರಡಿ ಕಂಪಡರಿ
ಬಾಗಿಲಲಿ ಕಾದಿರುವೆ
ಒಳಗೆ ಬಾ ಹುಡುಗಾ...
ಅಂಗಳದ ರಂಗೋಲಿಯ ತುಳಿಯದೆ
ನೀ ಕೇಳಿದ್ದನ್ನೇ ಕೊಡುವೆ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...