Monday 4 September 2017

...ನಿಜಕ್ಕೂ ಉರಿಯುತ್ತಿರುವುದು ಮಣ್ಣು!

ದೇಶದ ಉಪರಾಷ್ಟ್ರಪತಿಯೊಬ್ಬರು ತಮ್ಮ ಅಭದ್ರತೆಯ ಬಗ್ಗೆ ಮಾತನಾಡಿದ್ದಾರೆ..ಆ ಮೂಲಕ ದೇಶದ ಅಸಹಷ್ಣತೆಯ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ..ಹಾಗೆ ನೋಡಿದರೆ,ದೇಶದಲ್ಲಿ ಇದ್ದಿರಬಹುದಾದ intoleranceನ್ನು ಮೊದಲು ಗುರುತಿಸಬೇಕಿದ್ದುದು ಮಾಧ್ಯಮಗಳಾಗಬೇಕಿತ್ತು,ಆದರೆ ಚಲನಶೀಲ(in motion?)ಸಾಹಿತ್ಯವಲಯ ಅದನ್ನು ಗುರುತಿಸಿತು,ನಂತರ ಕೆಲ stationary(ಕುಂತಲ್ಲೆ ಗಿರಗಿಟ್ಲೆ ಹೊಡೆಯುವ)ಸಾಹಿತಿಗಳು ಅವರನ್ನು ಅನುಸರಿಸಿದರು.
...ಸ್ವೀಕರಿಸುವಾಗ ಪಡೆದ ಪ್ರಚಾರವನ್ನು ಸಕಲೆಂಟು ಮಾಧ್ಯಮಗಳ ಕವರಿಂಗ್ ಅಡಿ ಪ್ರಶಸ್ತಿ ಹಿಂತಿರುಗಿಸುವಾಗಲೂ ಪಡೆದರು.
ಇವರೆಲ್ಲರೂ ಅಕಾಡೆಮಿಕ್ ವಲಯ,ಪರಿಷತ್ತು,ಮಾಧ್ಯಮಗಳಿಂದ ಬಂದವರಾಗಿದ್ದು ಸಹಜವಾಗಿಯೇ ನಗರ ಪ್ರದೇಶಗಳಲ್ಲಿ ವಾಸಿಸುವವರಾದ್ದರಿಂದ,ಅವರು ನಗರ ಪ್ರದೇಶಗಳಲ್ಲಿ ಇರುವಂಥ intolerance ನ್ನು ಮಾತ್ರವೇ ಗುರುತಿಸಿದ್ದರು.
ದೇಶದ ಹಳ್ಳಿಗಳಲ್ಲಿ ಇರುವ intoleleranceಬಗ್ಗೆ ಯಾವ ಮಾಧ್ಯಮಗಳೂ ಆಸಕ್ತಿ ತೋರಿಸಲಿಲ್ಲ.
ವಾಸ್ತವವಾಗಿ ನಿಜವಾದ intolerance ಇರುವುದು ಹಳ್ಳಿಗಳಲ್ಲಿ!ಭೂಮಿಯನ್ನು ನಂಬಿ ಬದುಕುತ್ತಿರುವವರ ಬದುಕಿನಲ್ಲಿ!ಪ್ರತಿದಿನವೂ ಕ್ಷಣವೂ ಅಸಹನೆ,ಅಸಹಿಷ್ಣತೆಗಳು ತಾಂಡವಿಸುತ್ತಿವೆ!ಹಳ್ಳಿಗಳಲ್ಲಿನ ಜನ ಭಯದ ಮಧ್ಯೆ ಬದುಕುತ್ತಿದ್ದಾರೆ!
ಅದಕ್ಕೆ ಪ್ರಕೃತಿ ಕಾರಣವೋ,ಪಕ್ಷಗಳು ಕಾರಣವೋ,ಪ್ರಧಾನಿ ಕಾರಣವೋ ಗೊತ್ತಿಲ್ಲ.
ಜನಗಳಲ್ಲಿ ಮೊದಲಿದ್ದ ಸಾಮರಸ್ಯ ಈಗುಳಿದಿಲ್ಲ.ಯಾವ ಹಬ್ಬಗಳೂ ವಿವಾದ,ಹೊಡೆದಾಟಗಳಿಲ್ಲದೆ ನಡೆಯುತ್ತಿಲ್ಲ.ಯಾವ ಯೋಜನೆಗಳೂ ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿಲ್ಲ.
ಸಾರಾಯಿ ಬಂದ್ ಆದಾಗಿನಿಂದ ಹಳ್ಳಿಗಳ ಎಲ್ಲಾ ಸಣ್ಣಪುಟ್ಟ ಕಿರಾಣಿ,ಗೂಡಂಗಡಿಗಳಲ್ಲೂ ಲಿಕ್ಕರ್  ಸಿಗುತ್ತಿರುವುದರಿಂದ ಹಳ್ಳಿಗಳಲ್ಲಿನ ಹುಡಗರೆಲ್ಲಾ ಹಗಲುಗುಡುಕರಾಗುತ್ತಿರುವುದಕ್ಕೆ ಯಾವ ಮುಖ್ಯಮಂತ್ತ್ರಿ ಕಾರಣವೋ ಗೊತ್ತಿಲ್ಲ.
ಪ್ರತಿಭಟಿಸಲು ಸಾಹಿತಿಗಳಿಗೇನೋ ಸರ್ಕಾರ ಕೊಟ್ಟ ಪ್ರಶಸ್ತಿಯ ತಗಡಿನ ಫಲಕಗಳೋ  ಪದಕಗಳೋ ಇದ್ದವು....ಹಳ್ಳಿಗಳಲ್ಲಿನ ರೈತರಲ್ಲಿ ಜೀವವೊಂದು ಬಿಟ್ಟು ಬೇರೆ ಏನು ತಾನೇ ಉಳಿದಿತ್ತು?....ಅದನ್ನೇ ರೈತ ಸರ್ಕಾರಕ್ಕೆ ಅತ್ಯಂತ ವಿನಯದಿಂದಲೇ ಅರ್ಪಿಸಿಕೊಳ್ಳುತ್ತಿದ್ದಾನೆ.
ಕೆಲವರು ಅದನ್ನೂ ಕೂಡಾ ವ್ಯಂಗ್ಯವಾಗಿಯೇ ನೋಡುತ್ತಿದ್ದಾರೆ....
ಅದಿರಲಿ,ರೈತರಿಗೆ ದೇಶದಲ್ಲಿನ ,ರಾಜ್ಯದಲ್ಲಿನ,ಅವರ ಊರು,ಅವರ ಬದುಕುಗಳಲ್ಲಿನ intolerance ವಿರುದ್ಧ ಪ್ರತಿಭಟಿಸಲು ಆತ್ಮಹತ್ಯೆಗಿಂತಲೂ ಬೇರೆ ರೀತಿಯ ಗೌರವಯುತವಾದದಾರಿಗಳು ಯಾವೂ ಇಲ್ಲವೇ?ಅವರ ಆತ್ಮಹತ್ಯೆಗಳೂ intoleranceವಿರುದ್ಧದ ಪ್ರತಿಭಟನೆ ಎಂದು ಸರ್ಕಾರಗಳು,ಮಾಧ್ಯಮಗಳಿಗೆ ಅನಿಸುವುದು ಯಾವಾಗ?

x

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...