Wednesday 22 April 2020

ಕ್ವೇರಂಟೀನ್ ಕವಿತೆಗಳು -೦೪

ಈ ಸಾವು ಬಂದು ಬಾಗಿಲು ತಟ್ಟಿದರೆ
ಕದ ತೆರೆಯುವುದು ಒಳಗಿದ್ದ ಹಸಿವೇ!
ಆ ರೋಗ,ಹಸಿವನ್ನು ಸಾಯಿಸಲಾರದು..
ಸಾವಿಗೂ ಹಸಿವೆಂದರೆ ಅವ್ಯಕ್ತ ಭಯ ನೋಡು!
ಹಾಗಾಗಿಯೇ.......
ಬಡತನಕ್ಕೆ ಕಾಲು ಚಾಚಿ ಮಲಗುವಷ್ಟು ನಿರಾಳತೆ!

ಈಗೀಗ ಅನ್ನವೂ ಕೂಡ 
ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆಯೇನೋ..
ಬಡವರಿಂದ,ಶ್ರಮಿಕರಿಂದ ಅದು ದೂರ ದೂರ!
ಬೀಜ ಬಿತ್ತಿ ಬೆವರು ಬಸಿದು ಬೆಳೆದವನ ಹೊಟ್ಟೆ ಸತ್ತಿದೆ.
ಗಿಲೀಟು ಮಾಡುವ ಜನರ ಹೊಟ್ಟೆಯ ಗಾತ್ರ ನೋಡು!
ಹಾಗಾಗಿಯೇ.....
ಭೂಮಿಗೂ ಮಳೆಗೂ ಅಪಾತ್ರರಿಗೆ ಅನ್ನವಿಕ್ಕುವ ಲೋಪ!!

ಹಸಿವನ್ನು ಕೊಲ್ಲುವ ರೋಗವಿರಬೇಕಿತ್ತು.
ಹಸಿವನ್ನು ಕೊಲ್ಲುವ ಔಷಧವಾದರೂ ವಿಷವಾದರೂ ಸರಿ.
ಅನ್ನಭಾಗ್ಯದ ಸರ್ಕಾರ,ಆ ರೋಗವನ್ನು ವಿತರಿಸಬೇಕಿತ್ತು.
ಹೌದು ಬರೀ ಬಿಪಿಎಲ್ಲು,ಅಂತ್ಯೋದಯದ ಆರ್ಥಿಗಳಿಗಾಗಿ.
ಹಾಗಾಗಿದ್ದಿದ್ದರೆ......
ಹಸಿವಿರುತ್ತಿರಲಿಲ್ಲ..ಬಡವರಿರುತ್ತಿರಲಿಲ್ಲ..ಭಾಗ್ಯಗಳಿರುತ್ತಿರಲಿಲ್ಲ.
ದೇಶ ಶ್ರೀಮಂತರಿಂದ ಶ್ರೀಮಂತವಾಗಿರುತ್ತಿತ್ತು...!!!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...