Thursday 4 April 2024

ಜನ-ಜಾಣತನ


 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ್ಲಿ ಏನಾದರೂ ಕೊಂಡಾಗ ಮಾತ್ರ ಹೇಳಬಲ್ಲ ಅವನು!
ಯಾರಾದರೂ ಟೈಮೆಷ್ಟು ಅಂತ ಕೇಳಿದರೆ, ಜನ ಹೇಳಲಾರದ ಕಾಲವಿದು! ಆಸುಪಾಸು ಯಾರಾದರೂ ಸತ್ತರೂ, ಆ ಕಡೆ ತಿರುಗಿಯೂ ನೋಡದೆ, ಫೇಸ್‌ಬುಕ್‌ ನಲ್ಲಿ ಲೈಕು,RIP ಹಾಕುವವರ ಯುಗ!

ಬೆಳಗ್ಗೆ ಏನ್ ತಿಂದಿದ್ದೆ ಅನ್ನೋದನ್ನೂ ಫೋನ್ ನೋಡಿ ಹೇಳುವ, ದೇಶದ ರಾಜಧಾನಿ ಯಾವುದು ಎಂದರೆ, ಗೂಗಲ್ ಮಾಡುವವರ ಜಮಾನಾ ಇದು!

ನಾವು ಜಾಣರಾಗತ ಇದೇವಾ? ದಡ್ಡರಾಗತ ಇದೇವಾ? ನಮ್ಮ ಜ್ಞಾಪಕಶಕ್ತಿ ನಿರುಪಯುಕ್ತ ಆಗತ ಇದೆಯಾ? 

ಆದರೆ, ನಾವು ಸ್ವಾರ್ಥಿಗಳಾಗತ ಇದೇವೆ,ಸಂಕುಚಿತಗೊಳತಾ ಇದೇವೆ. ಕುತಂತ್ರ-ದಗಾ-ಮೋಸಗಳು ಈಗ ಸಹಜ ಎನ್ನುವಷ್ಟರ ಮಟ್ಟಿಗೆ ಹೊಂದಿಕೊಳತಾ ಹೋಗಿದೇವೆ.

ಅದೆಲ್ಲೋ ಗುಲಾಂ ಆಲಿಯ ಘಜಲ್ ತೇಲಿಬರತಾ ಇದೆ. ಸೂರ್ಯ - ಯಾವುದರ ಪರಿವೆಯಿಲ್ಲದೆ,ಏನನ್ನೂ ನಿರೀಕ್ಷಿಸದೆ, ಸೃಷ್ಟಿ ಸಮಸ್ತದ ದಿನವೊಂದನ್ನು ಮುಗಿಸಿದ ಆ ಸೂರ್ಯ ಪರಮಾತ್ಮ ಪಶ್ಚಿಮದಲ್ಲಿ ವಿಶ್ರಾಂತಿ ಪಡೆಯಲು ಹವಣಿಸುತ್ತಲಿದ್ದರೆ..

ಮನೆ ಮುಂದಿನ ಹುಣಸೇಮರದಲ್ಲಿ ಹಕ್ಕಿಗಳ ಕಲರವ!! ಹೂವು ಅರಳುವ ಸದ್ದು ಅವುಗಳಿಗೆ ಮಾತ್ರವಾ ಕೇಳಿಸುವುದು?

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...