ಅದೆಷ್ಟು ದಿನಗಳಾದವು ಬದುಕೇ...ತಮಾಷೆಗೂ ನಗಿಸಲಿಲ್ಲ ಯಾರನ್ನೂಕಾಲದ ಬಗೆಗೊಂದು ನನ್ನ ತಕರಾರಿದ್ದೇ ಇದೆ!ಹೆಜ್ಜೆ ಮೂಡಿಸದ ನನ್ನ ದಾರಿಯಲ್ಲಿಅದೆಷ್ಟೋ ಕನಸುಗಳ ಹೂ ಅರಳಿ ಬಾಡಿದ್ದವಲ್ಲವೇ?ಬದುಕಿನ ಸುಂಕ ಕಟ್ಟಿದ್ದವನಿಗೆಸಾವು ಮುಫತ್ತಾಗಬೇಕಿತ್ತು...ದುಬಾರಿಯಾಗಿದೆ!ಬದುಕಿನ ಹಾಳೆ ಹರಿದು ಹಾಕಿದವನಿಗೆಬದಲಾಗುವ ತಾರೀಖುಗಳ ಬಗೆಗೆಎಂದಿಗೂ ಕುತೂಹಲವಿರಲಿಲ್ಲ..ಇಂದಿಗೂ!!ಇರುಳ ಬೆರಳಿಗೆ ನಿನ್ನ ನೆನಪಿನುಂಗುರವಿಟ್ಟರೆಅದೆಲ್ಲಿಯದೋ ಒಂದು ಬೆಳಕು ಬರುತ್ತದೆ..ಅಷ್ಟು ಸಾಕೆನಿಸಿಬಿಡುತ್ತದೆ..ಉಂಡು ಮಲಗಲು!ನಮ್ಮೊಳಗಷ್ಟೇ ಅನಂತದ ನಿರಂತರ ಬಯಲು..ಹೊರಗೆ ಹೋಗಬೇಡ..ಅಪ್ಪಿತಪ್ಪಿಯೂ ಕೂಡ!ಅಲ್ಲಿ ಹೆಜ್ಜೆಗೊಂದೊಂದು ಗೋಡೆ..ಪ್ರಶ್ನೆಗಳ ಬಂಧ!!ಹೀಗೇ ಇದ್ದುಬಿಡುವ.. ಕಾಲ ಕರೆವತನಕ!!
Thursday, 7 January 2021
ಹೊರಗೆ ಹೋಗಬೇಡ ...ಅಪ್ಪಿ ತಪ್ಪಿಯೂ...
Subscribe to:
Post Comments (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...

-
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೆಲವೊಂದು ಸಿನಿಮಾಗಳು, ಇಡೀ ಮನಸ್ಸನ್ನು ಆವರಿಸಿಬಿಡುತ್ತವೆ. ಬಹುಕಾಲ ಕಾಡುತ್ತಲೇ ಇರುತ್ತವೆ. ತಲ್ಲಣಗಳನ್ನು ಎಬ್ಬಿಸಿ,ಆಳವನ್ನು ತಾಕುತ್ರವೆ. ನಾನು ತುಂಬಾ ಹಚ್ಚಿಕೊಂಡ...
-
ಗ್ರಾಮಭಾರತದಲ್ಲಿ ದೇಸೀ ಹಬ್ಬಗಳು ಈ ಆಧುನಿಕ ಯುಗದಲ್ಲೂ ಪಳೆಯುಳಿಕೆಯ ರೂಪದಲ್ಲಿಯಾದರೂ ಇನ್ನೂ ಆಚರಿಸಲ್ಪಡುತ್ತಿರುವುದು ಅವುಗಳ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಜೋಕ...
No comments:
Post a Comment