ಅದೆಷ್ಟು ದಿನಗಳಾದವು ಬದುಕೇ...ತಮಾಷೆಗೂ ನಗಿಸಲಿಲ್ಲ ಯಾರನ್ನೂಕಾಲದ ಬಗೆಗೊಂದು ನನ್ನ ತಕರಾರಿದ್ದೇ ಇದೆ!ಹೆಜ್ಜೆ ಮೂಡಿಸದ ನನ್ನ ದಾರಿಯಲ್ಲಿಅದೆಷ್ಟೋ ಕನಸುಗಳ ಹೂ ಅರಳಿ ಬಾಡಿದ್ದವಲ್ಲವೇ?ಬದುಕಿನ ಸುಂಕ ಕಟ್ಟಿದ್ದವನಿಗೆಸಾವು ಮುಫತ್ತಾಗಬೇಕಿತ್ತು...ದುಬಾರಿಯಾಗಿದೆ!ಬದುಕಿನ ಹಾಳೆ ಹರಿದು ಹಾಕಿದವನಿಗೆಬದಲಾಗುವ ತಾರೀಖುಗಳ ಬಗೆಗೆಎಂದಿಗೂ ಕುತೂಹಲವಿರಲಿಲ್ಲ..ಇಂದಿಗೂ!!ಇರುಳ ಬೆರಳಿಗೆ ನಿನ್ನ ನೆನಪಿನುಂಗುರವಿಟ್ಟರೆಅದೆಲ್ಲಿಯದೋ ಒಂದು ಬೆಳಕು ಬರುತ್ತದೆ..ಅಷ್ಟು ಸಾಕೆನಿಸಿಬಿಡುತ್ತದೆ..ಉಂಡು ಮಲಗಲು!ನಮ್ಮೊಳಗಷ್ಟೇ ಅನಂತದ ನಿರಂತರ ಬಯಲು..ಹೊರಗೆ ಹೋಗಬೇಡ..ಅಪ್ಪಿತಪ್ಪಿಯೂ ಕೂಡ!ಅಲ್ಲಿ ಹೆಜ್ಜೆಗೊಂದೊಂದು ಗೋಡೆ..ಪ್ರಶ್ನೆಗಳ ಬಂಧ!!ಹೀಗೇ ಇದ್ದುಬಿಡುವ.. ಕಾಲ ಕರೆವತನಕ!!
Thursday 7 January 2021
ಹೊರಗೆ ಹೋಗಬೇಡ ...ಅಪ್ಪಿ ತಪ್ಪಿಯೂ...
Subscribe to:
Post Comments (Atom)
ಜನ-ಜಾಣತನ
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
-
ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವ...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...
-
ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು! ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧ...
No comments:
Post a Comment