ಅದೆಷ್ಟು ದಿನಗಳಾದವು ಬದುಕೇ...ತಮಾಷೆಗೂ ನಗಿಸಲಿಲ್ಲ ಯಾರನ್ನೂಕಾಲದ ಬಗೆಗೊಂದು ನನ್ನ ತಕರಾರಿದ್ದೇ ಇದೆ!ಹೆಜ್ಜೆ ಮೂಡಿಸದ ನನ್ನ ದಾರಿಯಲ್ಲಿಅದೆಷ್ಟೋ ಕನಸುಗಳ ಹೂ ಅರಳಿ ಬಾಡಿದ್ದವಲ್ಲವೇ?ಬದುಕಿನ ಸುಂಕ ಕಟ್ಟಿದ್ದವನಿಗೆಸಾವು ಮುಫತ್ತಾಗಬೇಕಿತ್ತು...ದುಬಾರಿಯಾಗಿದೆ!ಬದುಕಿನ ಹಾಳೆ ಹರಿದು ಹಾಕಿದವನಿಗೆಬದಲಾಗುವ ತಾರೀಖುಗಳ ಬಗೆಗೆಎಂದಿಗೂ ಕುತೂಹಲವಿರಲಿಲ್ಲ..ಇಂದಿಗೂ!!ಇರುಳ ಬೆರಳಿಗೆ ನಿನ್ನ ನೆನಪಿನುಂಗುರವಿಟ್ಟರೆಅದೆಲ್ಲಿಯದೋ ಒಂದು ಬೆಳಕು ಬರುತ್ತದೆ..ಅಷ್ಟು ಸಾಕೆನಿಸಿಬಿಡುತ್ತದೆ..ಉಂಡು ಮಲಗಲು!ನಮ್ಮೊಳಗಷ್ಟೇ ಅನಂತದ ನಿರಂತರ ಬಯಲು..ಹೊರಗೆ ಹೋಗಬೇಡ..ಅಪ್ಪಿತಪ್ಪಿಯೂ ಕೂಡ!ಅಲ್ಲಿ ಹೆಜ್ಜೆಗೊಂದೊಂದು ಗೋಡೆ..ಪ್ರಶ್ನೆಗಳ ಬಂಧ!!ಹೀಗೇ ಇದ್ದುಬಿಡುವ.. ಕಾಲ ಕರೆವತನಕ!!
Thursday, 7 January 2021
ಹೊರಗೆ ಹೋಗಬೇಡ ...ಅಪ್ಪಿ ತಪ್ಪಿಯೂ...
Subscribe to:
Post Comments (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೋವಿಡ್ ನ ಈ ದುರಿತಕಾಲದಲ್ಲಿ ಗುಳೆ-ವಲಸೆ,ಹಸಿವು,ಸಾವು ಎಂಬೆಲ್ಲಾ ಶಬ್ಧಗಳನ್ನು ಕೇಳಿದಾಗ ಆಯಾಚಿತವಾಗಿ ಬಸವಣ್ಣ ನೆನಪಾಗಿಬಿಡುತ್ತಾನೆ. ಅವನ ಸಮಾಜವಾದೀ ಸಮಸಮಾಜದ ಕಲ್ಪನೆ...
-
ನಾವು ಬೆಳಕು ಬಿತ್ತದೇ ಬೆಳಕು ಬೆಳೆಯಬಲ್ಲೆವು ಎಂದು ನಂಬಿದವರು. ಬೆಳಕೆಂದರೆ ವೇಗ, ಬೆಳಕೆಂದರೆ ಬೆತ್ತಲೆ, ಬೆಳಕೆಂದರೆ ವ್ಯಾಮೋಹ, ಬೆಳಕೆಂದರೆ ಕ್ರೌರ್ಯ. ಬೆಳಕಿನಲ್ಲೇ ಕತ್...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...

No comments:
Post a Comment