Monday 24 January 2022

ಮಾರಾಟವಾಗುತ್ತಿರುವ ಬಡವರ ಆಶ್ರಯಮನೆಗಳು!


 ರೈತರ ಸುಗ್ಗಿ ಒತ್ತಟ್ಟಿಗಿರಲಿ..ಈ ಜನಪ್ರತಿನಿಧಿಗಳಿಗಂತೂ ಇದು ಸುಗ್ಗಿಯ ಕಾಲ! ಪಂಚಾಯತಿ ಮೆಂಬರುಗಳಿಂದ ಹಿಡಿದು,ಮಂತ್ರಿ-ಶಾಸಕನವರೆಗೂ ಇರೋ ಬರೋ ಸ್ಕೀಮುಗಳಲ್ಲೆಲ್ಲಾ ದುಡ್ಡು ಬಾಚಿಕೊಳ್ಳುವ 'ಕಟಾವು' ಸಮಯ!

             ಈ ಬಡವರಿಗಾಗಿ ಇರುವ "ವಸತಿ" ಯೋಜನೆಯನ್ನೇ ತೆಗೆದುಕೊಳ್ಳಿ. ಎರಡು ಲಕ್ಷದ ಈ ಸ್ಕೀಮಿಗೆ ಫಲಾನುಭವಿಗಳು,ತಮ್ಮ ಪಂಚಾಯತಿ ಮೆಂಬರುಗಳಿಗೆ ಬರೋಬ್ಬರಿ 30 ರಿಂದ 40 ಸಾವಿರ ಕೊಡಲೇಬೇಕು! ನನ್ನೂರಿನಲ್ಲಂತೂ ಆ ಬಡ ಫಲಾನುಭವಿಗಳು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.ಎಲ್ಲಿಂದ ತರಬೇಕು ಅವರು ಆ ದುಡ್ಡನ್ನು? 

           ಮೊನ್ನೆ ತಾನೇ ಎಮ್ಮೆಲ್ಸಿ ಎಲೆಕ್ಷನ್ನಿನಲ್ಲಿ 60-70 ಸಾವಿರ ಬಾಚಿಕೊಂಡಿದ್ದ ಈ ಪಂಚಾಯತಿ ಮೆಂಬರುಗಳಿಗೆ ಕನಿಷ್ಠ ಮಾನವೀಯತೆ ಇಲ್ಲವೇ? ಜಾತಿ-ಸಮುದಾಯ-ಗುಡಿಗಳ ಹೆಸರಿನಲ್ಲಿ ಅಷ್ಟೋ ಇಷ್ಟೋ ದುಡ್ಡು ಕೊಟ್ಟು , ಒಂದಷ್ಟು ಚಿಲ್ರೆ ಹಂಚಿ,ಎಣ್ಣೆ ,ಕೋಳಿ, ಮಂಡಕ್ಕಿ ಹಂಚಿ ಗೆದ್ದವರಿಗೆ ಈಗ ಬಂಪರ್ ಲಾಭ! ಅಧಿಕಾರಿಗಳೂ ಇವರಿಗೆ ಬೇಕಾದಂತೆ ನಿಯಮಗಳನ್ನು ಮಾಡುತ್ತಲಿದ್ದಾರೆ!

            ಡಾ|| ಎಚ್.ಎಂ.ಎಂ. ಕಂಡಿದ್ದ "ಪಂಚಮುಖೀ ಗ್ರಾಮಾಭ್ಯುದಯ" ದ ಕನಸನ್ನು ನೆನೆದಾಗ ವಿಷಾದವೆನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ.

ಬಾಬಾ ಸಾಹೇಬರ ಸಂವಿಧಾನ ಮಾತ್ರ ನಿರ್ಲಿಪ್ತವಾಗಿ ಪಾರ್ಲಿಮೆಂಟಿನಲ್ಲಿ ಭದ್ರವಾಗಿ ಕೂತು,ಸದ್ದಿಲ್ಲದೆ ಅಳುತ್ತಿದೆ!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...