Monday 24 January 2022

ನನ್ನೂರ ತೇರು!


 ತೇರನ್ನೇನೋ ಎಳೆದು ನೆಲೆಗೆ ನಿಲ್ಲಿಸಲಾಗಿದೆ.ಅದು ಹುಟ್ಟು ಹಾಕಿದ ಮನಸ್ಸಿನ ತಲ್ಲಣದ ಮೆರವಣಿಗೆ ಮಾತ್ರ ಇನ್ನೂ ನಡೆಯುತ್ತಲೇ ಇದೆ!

ನನ್ನೂರಿನ "ಹಾಲಪ್ಪಜ್ಜನ ಜಾತ್ರೆ" ಯು ಸಂಸ್ಕೃತಿ,ಸಹಬಾಳ್ವೆ , ಸಮೈಕ್ಯತೆಗಳ ಸಂಭ್ರಮವಾಗಿತ್ತಾ? - ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲಿಲ್ಲ.


ಎಳೆಯ ವಯಸ್ಸಿನ ಹುಡುಗರೆಲ್ಲಾ ಕುಡಿದು,ತೂರಾಡುತ್ತ ಕುಣಿದದ್ದು ಸಂಸ್ಕೃತಿಯಾ? ಎಲ್ಲಿ ನೋಡಿದರೂ ಬರೀ ಕುಡುಕರದ್ದೇ ಜಾತ್ರೆ!

ಜಾತಿ ವೈಷಮ್ಯದ ಹೊಗೆಯು ಆವಾಗವಾಗ ಎದ್ದು ಉರಿದದ್ದು ಅದೆಂಥಾ ಸಹಬಾಳ್ವೆ?

ಉಳ್ಳವರಿಗೊಂದು-ಇಲ್ಲದವರಿಗೊಂದು ಬಗೆವ ಈ ಜಾತ್ರೆಯಲ್ಲಿದ್ದದ್ದು ಅದೆಂಥಾ ಸಮೈಕ್ಯತೆ? 

ಆರತಿ ಹಿಡಿದವರ ಸಾಲಲ್ಲಿ ಹಳೆಯದೊಂದು ಸೀರೆಯುಟ್ಟು ಮುದುಡಿ ಕುಳಿತಿದ್ದ ಆ ಬಡಬಾಲೆಯ ಕಣ್ಣನೋಟ...

ಗುಡಿಯೊಳಗೆ ಹೋಗಲಾಗದೆ,ಹೊರಗೆಯೇ ಕೈಮುಗಿದು ಕಣ್ಣಲ್ಲಿ ತೊಟ್ಟಿಕ್ಕಿದ ಕಂಬನಿ ಹನಿಗಳನ್ನೊರೆಸಿಕೊಂಡ ತಳಜಾತಿಯ ಆ ತಾಯಿಯೊಬ್ಬಳ ನಿಟ್ಟುಸಿರು...

ಬಳೆಯಂಗಡಿಯು ಮುಂದೆ ಬರಿಗೈಲಿ ಬಳೆಗಳೆಡೆ ನೋಡುತ್ತ ನಿಂತ ಆ ಸಣ್ಣ ಹುಡುಗಿಯೊಬ್ಬಳ ಎದೆಯ ಕುದಿ...


ದೇಹ-ಮನಸ್ಸುಗಳೆರಡೂ ದಣಿವು,ಜಿಗುಪ್ಸೆಗಳಿಂದ ಕದಡಿ ಹೋಗಿಬಿಟ್ಟಿದೆ.

I wouldn't let myself get into this again..No NOMORE .. NEVER! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...