ಇನ್ನಾವ ಮಾತುಗಳೂ
ಬೀಳದ ಕಿವಿಯಲ್ಲಿ
ನಿನ್ನ ದನಿಯೇ ಕೊನೆಯಾಗಬೇಕು.
ಮರಗಟ್ಟಿರುವ ನನ್ನ ಕೈ ತೊಗಲಿಗೆ
ನಿನ್ನ ಸ್ಪರ್ಶವೇ
ಕೊನೆಯ ಸಂವೇದನೆಯಾಗಬೇಕು.
ನನ್ನ ಮೂಗು ಎಳೆವ ಕೊನೆಯುಸಿರಿಗೆ
ನಿನ್ನ ಮೈಯ ಘಮಲು ಬೆರೆಯಬೇಕು.
ಕಣ್ಣುಮುಚ್ಚುವ ಮುನ್ನ ಎದುರಿಗೆ
ನಿನ್ನ ತುಂಬಿದ ಕಣ್ಣು ಕಾಣಬೇಕು.
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
No comments:
Post a Comment