Monday 21 February 2022

ಪ್ರಾರ್ಥನೆ...


ಸಾವಿನ ವಿಚಾರ ಇರಲಿ,

ಬದುಕು ಕೇಳುವ ಪ್ರಶ್ನೆಗಳಿಗೆ

ಉತ್ತರಿಸಲಾರೆಯಾ ಭಗವಂತಾ?

ಪೂಜಿಸು ಎಂದೆ, ಆರಾಧಿಸಿದೆ.

ಬೇಡಿಕೋ ಎಂದೆ,ಅಂಗಲಾಚಿದೆ.

ಈಗ ಮೋಕ್ಷ-ವಿಮುಕ್ತಿಗಳೆಂಬ

ಕೆಲಸಕ್ಕೆ ಬಾರದವುಗಳ ಅಮಿಷವೊಡ್ಡಿ

ನನ್ನ ಬದುಕಿನ ದಾರಿ ತಪ್ಪಿಸಿರುವೆ.

ಸಾವಿನ ಭಯವನ್ನೂ ಹುಟ್ಟಿಸಿರುವೆ.

ನ್ಯಾಯಾಧಿಪತಿಯಂತೆ ನೀನು ಸಮಸ್ತಕ್ಕೆ

ನ್ಯಾಯವಾ ಇದು? ನೀನೇ ಹೇಳಿಬಿಡು!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...