Monday 12 February 2018

ಹುಚ್ಚು ಖೋಡಿ ಮನಸು -೨

ಆ ಹೆಪ್ಪುಗಟ್ಟಿದ ಮೌನದಲ್ಲೂ
ಬೇಸರ ಬರದಂತೆ...
ನೆತ್ತಿ ಸುಡು ಬಿಸಿಲಲ್ಲೂ
ಪಾದ ತಂಪು ಮಾಡುತ್ತ..
ಕಣ್ಣಲ್ಲಿ ಬಿದ್ದ ಧೂಳ ಕಣವನ್ನು
ಲಂಗದ ತುದಿಯಿಂದ
ಎಳೆಮಾಡಿ ತೆಗೆದು
ಸೆರಗನ್ನು ಇಬ್ಬರ ತಲೆಗೂ
ಹೊದಿಸಿದವಳು!!

ನಿನ್ನೆಯ ಅನುಭವದ ಜೊತೆ
ಇಂದಿನ ವಾಸ್ತವ ಬೆರೆಸಿ...
ನಾಳೆಯ ಭರವಸೆಯ ಬಿತ್ತಿ
ಬದುಕ ಪ್ರೀತಿಸ ಹೇಳಿ...
ಅಲ್ಲೆಲ್ಲೋ ಹಾರುತ್ತಿದ್ದ
ಜೋಡಿ ಗುಬ್ಬಿಗಳ ತೋರಿ...
ಏನೋ ಹೇಳಹೊರಟು
ತುಟಿಕಚ್ಚಿ,ಅರ್ಧಕ್ಕೆ ನಿಲ್ಲಿಸಿದವಳು!!

ನೀನೇನು ಭ್ರಮೆಯಾ?
ನಿನ್ನದೇನು ಬರೀ ಕಲ್ಪನೆಯಾ?
ಬಿಗಿಹಿಡಿದು ಕೇಳಿದ್ದಕ್ಕೆ-
ಭ್ರಮೆ ಮತ್ತು ವಾಸ್ತವಗಳ
ಮುಖಾಮುಖಿ ಅಂದವಳು!!!
ಸಿಗದ ಅರ್ಥವನ್ನು ಹುಡುಕುತ್ತಿತ್ತು
ನನ್ನ ಹುಚ್ಚುಖೋಡಿ ಮನಸು!!!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...