Tuesday 13 February 2018

ಹುಚ್ಚು ಖೋಡಿ ಮನಸು -೩

ಕೈ ಬಳೆಯ ದನಿ ಕಾಲ್ಗೆಜ್ಜೆಯ ಸಪ್ಪುಳ
ಮುಡಿದ ಹೂವ ದಂಡೆಯ ಘಮಲು
ಸಾವಿರ ದೀಪ ಒಮ್ಮೆಗೇ ಬೆಳಗಿದಂಥ
ಫಳ್ಳನೆಯ ತುಂಟ ನಗು..
ಸತ್ತ ಹೆಣಕ್ಕೂ ಜೀವದಾಸೆ ಹುಟ್ಟಿಸುವ
ಮಧುರ ಸವಿಯ ಮಾತು..
ನಡೆದರೆ ಜೀವ ದ್ರವ್ಯದ ಹೊನಲು
ಕುಳಿತರೆ ಪಾರಿಜಾತ ಗಿಡದ ಟಿಸಿಲು
ಈ ಜೀವಕ್ಕಿಷ್ಟು ಸಾಕು ಬಿಡು
ಅಂದುಕೊಂಡು...ಬಾಚಿ ತಬ್ಬ ಹೋದರೆ,
ಅಲ್ಲೇನಿದೆ?...ಬರೀ ಬಟ್ಟ ಬಯಲು!
ಮುಡಿಯಿಂದುದುರಿದ ಹೂಗಳ ಘಮಲು!
ನನ್ನೊಲವೇ....
ಕಾಲವನ್ನೂ ನಿಲ್ಲಿಸುವೆ ನಿನ್ನ ಕಾಲ ಬಳಿ
ಕೊಡು ಒಂದೇ ಒಂದು ತಬ್ಬುಗೆಯ ಉಂಬಳಿ!
ಓದಿಕೋ....
ನನ್ನ ಹುಚ್ಚುಖೋಡಿ ಮನಸಿನ ಕಳಕಳಿ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...