Thursday 15 February 2018

ಹುಚ್ಚುಖೋಡಿ ಮನಸು -೪

"ಇಳಿ ಸಂಜೆಯ ತಿಳಿ ಮೌನ"…

ಕಡಲ ಮುಂದೆ
ನನ್ನ ಹೆಗಲಿಗೆ ನೀನು ಒರಗಿ
ಕೂತಿದ್ದನ್ನು ನೆನೆದು
ಹೃದಯ ಕೊರಗುತ್ತಿದೆ ..
ಪ್ರಾಣ ಬಿಡುವವರೆಗೂ
ನೀನು ಬಿಡುಅಂದರೂ ಬಿಡಲೊಲ್ಲೆ ಎಂದು
ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ
ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .

ಇಳಿ ಸಂಜೆಯ
ತಿಳಿ ಮೌನದಲ್ಲಿ
ನೀನು ಆಡಿದ ಮಾತುಗಳನ್ನೆಲ್ಲಾ
ಅಲೆಗಳು ಕೂಗಿ ಹೇಳಿದಂತಿದೆ ..
ದಡದಲ್ಲಿ ನಾವಿಬ್ಬರೂ
ಜೊತೆಗೆ ನಡೆದಾಡಿದ ಗುರುತನ್ನು
ಅಳಿಸಲು ಅಲೆಗಳು ಮರೆತಂತಿದೆ ..

ನಾನೇಕೆ ನಿನ್ನ ಬಳಿ ಬಂದೆ
ನೀನ್ಯಾಕೆ ನನ್ನ ಬಿಟ್ಟು ಹೋದೆ
ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ
ಎದೆಗೆ ಯಾರೋ ತಿವಿದಂತಿದೆ
ಆ ನೋವಿನಲ್ಲೇ ಬರೆದ ಸಾಲುಗಳಿಂದಲೇ
ನಾನು ‘ಕವಿ’ಯಾದಂತಿದೆ.

××××××××××××××××××××

೧.
ನಿನ್ನನು ಮರೆತು ಬಿಡೋಣ
ಅನ್ನುವಷ್ಟರಲ್ಲಿ
ಹೃದಯದಲ್ಲಿ ನಿನ್ನ ನೆನಪುಗಳ
ಪಥಸಂಚಲನ !

೨.
ನಿನ್ನ ನೆನಪುಗಳನ್ನು
ಹೊದ್ದು ಮಲಗಿದ್ದ ನನಗೆ
ಆಸರೆಯಾಗಿದ್ದು ಗಲ್ಲದ ಮೇಲೆ
ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು

೩.
ನೀನಾಡಿದ ಮಾತುಗಳೆನ್ನಲ್ಲಾ
ನಾನು ಸಂಗ್ರಹಿಸಿದ್ದೇನೆ.
ಒಂದು ಹೊತ್ತಿಗೆ ಹೊರತರಿಲಿದ್ದೇನೆ
“ಮೌನದೊಳಗಿನ ಮಾತುಗಳು ” ಎಂಬ
ಶೀರ್ಷಿಕೆಯಡಿ


ಅವಳ ಮೌನದೊಳಗೆ
ನನ್ನ ಮಾತು ಕೇಳಿಸಲೇ ಇಲ್ಲ
ಅಷ್ಟು ಸದ್ದು ಮಾಡಿತ್ತು ಅವಳ ಮೌನ !

ಅಲ್ಲೆಲ್ಲೋ ನನ್ನ ಹುಚ್ಚುಖೋಡಿ ಮನಸು
ಸದ್ದಿಲ್ಲದೆ ಕರಗಿ ಸತ್ತಿತ್ತು!!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...