Monday 19 February 2018

ಹುಚ್ಚು ಖೋಡಿ ಮನಸು-೫

ಮಾತುಗಳೆಲ್ಲವೂ
ಮೌನವ ಹೊದ್ದು ಮಲಗಿವೆ..
ನೆನಪುಗಳು ಬಂದು
ಬಡಿದೆಬ್ಬಿಸಿದರೂ ಏಳುತ್ತಿಲ್ಲ..
ಅವತ್ತು ನೀನು
ಹಚ್ಚಿಟ್ಟುಹೋದ ಹಣತೆ ಮಾತ್ರ
ಸಣ್ಣಗೆ ಎದೆಗೂಡಿನಲ್ಲಿ ಉರಿಯುತ್ತಿದೆ..
ನೀನು ಹನಿಸಿದ ಕಂಬನಿಯ ಬಿಂದು
ನನ್ನ ಮುಂಗೈ ಮೇಲೆ ಹಾಗೇ ಇದೆ..
ನನ್ನ ಬಿಟ್ಟು ಬದುಕಬಲ್ಲೆನೆಂಬ
ನಿನ್ನ ಹುಂಬತನದ ನವಿಲಿಗೆ
ಕಡೆಯದಾಗಿ ಒಂದೇ ಮಾತು ಹೇಳಲಾ?
ನೀನು ಹಚ್ಚಿದ್ದ ಹಣತೆಯ ಬೆಳಕಲ್ಲೇ
ಗೋರಿ ತೋಡುತ್ತದೆ ಬಿಡು ಈ ರಾತ್ರಿ
ನನ್ನ 'ಹುಚ್ಚು ಖೋಡಿ ಮನಸು' !!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...