Friday 4 March 2022

ರಂಗೋಲಿ


 

ಭಗವಂತಾ...
ನೀನು ಸರಿಯಾಗಿ ಎಣಿಸಿ ಇಟ್ಟ
ಸಾಲು ಚುಕ್ಕಿಗಳ ಮೇಲೆ
ಒಡಮೂಡಿದ ರಂಗೋಲಿ ನಾನು!
ಗಾಳಿಗೋ..ಪಾದ ಧೂಳಿಗೋ
ಕರಗಿ ಅಳಿಸುವ ಮುನ್ನ
ನೋಡಿದವರ ಮುಖದಲ್ಲಿ
ಅರೆಪಾವು ನಗುವರಳಿಸಿದರೆ ಸಾಕು!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...