Friday 4 March 2022

ನಂಬಿಗಸ್ತ


ಬದುಕು ಕೇಳುವ

ಸಾವಿರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ

ಜೀವವು ತತ್ತರಿಸಿದಾಗಲೆಲ್ಲಾ

ಆ ಸಾವು ಮಾತ್ರ

ಉತ್ತರ ನನ್ನಲ್ಲಿದೆ ಎಂದು

ಕೈ ಎತ್ತಿ ಮುಂದೆ ಬರುತ್ತದೆ!

ಬದುಕ ಬಯಲಿನಲ್ಲಿ

ಸಾವಿನೂರಿನ ದಾರಿಯನ್ನು 

ಹುಡುಕಲೇನು ಕಷ್ಟವೇನು?

ಬದುಕು ಕತ್ತಲು ಹೊದ್ದಾಗಲೆಲ್ಲಾ

ಸಾವು,ಬೆಳಕಿನಲ್ಲಿ ಫಳ್ಳನೆ ಮಿಂಚಿಬಿಡುತ್ತದೆ!

ಕೈ ಹಿಡಿದರೆ,ಬಿಟ್ಟಿತೇನು ಸಾವು?

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...