Sunday 6 March 2022

ದುರಂತದ ಹಂಬಲ

 ಒಂದೊಂದು ಸಲ,ಕೆಲವರಿಗೆ...

ಪ್ರೀತಿಯಷ್ಟೇ ಖುಷಿಯನ್ನು ಆ ದ್ವೇಷವೂ ಕೊಡುತ್ತದೆ.ಶಾಂತಿಗಿಂತ ಹೆಚ್ಚು ನಿರಾಳತೆಯನ್ನು ಯುದ್ಧ ಕೊಡುತ್ತದೆ.ಮಧುರ ಸಂಗೀತಕ್ಕಿಂತ ಹೆಚ್ಚು ರಂಜನೆಯನ್ನು ಈ ದೌರ್ಜನ್ಯ,ಹಿಂಸೆ,ಆಕ್ರಂದನಗಳು ಕೊಡುತ್ತವೆ.

ತಮಾಷೆ ಎನಿಸಬಹುದು ನಿಮಗೆ ;

ನೆಮ್ಮದಿಗಾಗಿ ಪರದಾಡುವಂತೆ,ದುರಂತಕ್ಕಾಗಿಯೂ ಹಂಬಲಿಸುತ್ತಾರೆ ಕೆಲವರು! 


"And two bodies ruined by a single sweetness.” - ಬರೆಯುತ್ತಾನೆ ನೆರುಡಾ!

ದುರದೃಷ್ಟವೇನು ಗೊತ್ತಾ? ಇತ್ತೀಚೆಗೆ ಇಂಥ ಮನಃಸ್ಥಿತಿಗಳು ಹೆಚ್ಚಾಗುತ್ತಿವೆ.Social Media Platform ಗಳು ಇಂತಹ ಮನಃಸ್ಥಿತಿಗಳನ್ನು Propogate ಮಾಡುತ್ತಿವೆ...ಮತ್ತು ಇದನ್ನೇ ಒಂದು ಒಳ್ಳೆಯ ಜೀವನ ಮೌಲ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಮುಂದಿನ ಸಂತತಿಗೆ ಇದು ಆದರ್ಶದ ಪಾಠವೂ ಆಗಬಹುದೇನೋ!


ಯಾರಿಗೋ ಟೋಪಿಹಾಕಿ 100 ರೂಪಾಯಿ ತೆಗೆದುಕೊಂಡು ಬಂದ ಮಗನನ್ನು ನಾವ್ಯಾರೂ ಬೈಯುತ್ತಿಲ್ಲ..'ಎಷ್ಟು ಜಾಣ' ಎಂದು ಹೆಮ್ಮೆಪಡುತ್ತಿದ್ದೇವೆ. ದೊಡ್ಡದೊಡ್ಡ Management College ಗಳಲ್ಲಿ ಜನರಿಗೆ ಯಾಮಾರಿಸಿ,ಉತ್ಪನ್ನಗಳನ್ನು ಹೇಗೆಲ್ಲಾ ಮಾರಬಹುದು ಎಂಬುದೇ Business Strategy ಯ, Ethic ಆಗಿ ಸಿಲಬಸ್ ಆಗಿ ಬೋಧಿಸಲಾಗುತ್ತಿದೆ.


         ಮತ್ತೆ ನಾವು ಮಾತ್ರ...ನಮ್ಮಗಳ ಫೇಸ್‌ಬುಕ್ -ವಾಟ್ಸಪ್ ಸ್ಟೇಟಸ್ಸುಗಳಲ್ಲಿ ಭಗವದ್ಗೀತೆ,ಉಪನಿಷತ್ತುಗಳ ಸೂಕ್ತಿಗಳನ್ನು ಹಾಕಿಕೊಳ್ಳುತ್ತಿರುತ್ತೇವೆ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...