Saturday 13 November 2021

ಕುಂ.ವೀ.ಯವರ "ಅರಮನೆ" ಕಾದಂಬರಿಯ ಬಗ್ಗೆ


ಕುಂ.ವೀ.ಯವರ 'ಅರಮನೆ' ವಿಶಿಷ್ಟವಾದ ಕೃತಿ.ಅದರ ಭಾಷೆಯ ನೇಯ್ಗೆಯೇ ಅತ್ಯದ್ಭುತ! ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತಳವೂರುವ ಆರಂಭಿಕ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ಅದರಲ್ಲೂ ಬಳ್ಳಾರಿ-ಆಂಧ್ರ ಭಾಗದ ತುಂಡು ಪಾಳೆಯಗಾರರು ತೆರೆಮರೆಗೆ ಸರಿಯುತ್ತಿದ್ದ ಯುಗಮಾನದಲ್ಲಿ "ಸರ್.ಥಾಮಸ್ ಮುನ್ರೋ" ಎಂಬ ಬ್ರಿಟಿಷ್ ಅಧಿಕಾರಿಯು ಇಲ್ಲಿನ ಗ್ರಾಮಭಾಗಗಳಲ್ಲಿ ಬದುಕಿದ ಸಂದರ್ಭವನ್ನು ಕುಂ.ವೀ.ಕಟ್ಟಿಕೊಡುತ್ತಾರೆ. ಕುದುರೆಡವು,ಜರ್ಮಲಿ,ಗುಡೇಕೋಟೆ ಯ ಪಾಳೇಪಟ್ಟಿನ ಹಳ್ಳಿಗೊಂಚಲುಗಳ ಜನಬಾಳ್ವೆಗಳು ಅನನ್ಯವಾಗಿ ತೆರೆದುಕೊಳ್ಳುತ್ತವೆ. ಜನಸಾಮಾನ್ಯರ ಇತಿಹಾಸದೆಡೆ ಕುತೂಹಲವುಳ್ಳವರಿಗೆ ಇದು ದಿಕ್ಸೂಚಿಯಾದೀತೇನೋ!

          ಹೇಳುವುದು ಮರೆತಿದ್ದೆ...ಕೂಡ್ಲಿಗಿ ತಾಲೂಕಿನ "ಸಿಡೇಗಲ್ಲು" ಗ್ರಾಮದಲ್ಲಿ ಆಗ ನಡೆದ ಪ್ರೇಮಪ್ರಕರಣವೊಂದನ್ನು ಕುಂ.ವೀ.ಇಲ್ಲಿ ಸುಂದರವಾಗಿ ಹರಡಿದ್ದಾರೆ. ಅಲ್ಲಿನ ಬಂಡೆ ಕಲ್ಲುಗಳಲ್ಲೂ ಜೀವಂತಿಕೆಯ ಸಾಕ್ಷ್ಯಗಳನ್ನು ಗುರುತಿಸುತ್ತಾರೆ. ಬಹುಶಃ ಇತಿಹಾಸಕಾರನ ನಿರುದ್ವಿಗ್ನ ಬರಡುತನಗಳು,ಸಂವೇದನೆಯುಳ್ಳ ಬರಹಗಾರರಾದ ಕುಂ.ವೀ.ಮೂಲಕ ನೀಗಿವೆ.
      
           ನನ್ನೂರ ಭಾಗದವರೇ ಆದ ಕುಂ.ವೀ.ಯವರ ಬಹುತೇಕ ಪುಸ್ತಕಗಳನ್ನು ಇಷ್ಟ ಪಟ್ಟು ಓದಿದ್ದೇನೆ. ಅವರ ಭಾಷೆಯು ನನ್ನೂರ ಭಾಗದ ಬಯಲುಸೀಮೆಯ ತೆಲುಗುಮಿಶ್ರಿತ ಕನ್ನಡವೇ ಅನ್ನುವುದೊಂದು ಕಾರಣವಾದರೆ, ಅವರ ಕಾದಂಬರಿ,ಕಥೆಗಳು ಕಟ್ಟಿಕೊಳ್ಳುವ ಪ್ರದೇಶವೂ ನನ್ನೂರಿನಂಥದ್ದೇ!  ಅದರಲ್ಲೂ ಗ್ರಾಮಭಾರತದ ತಳವರ್ಗದವರ ತಲ್ಲಣಗಳಿಗೇ ಅವರು ದನಿಯಾಗುವುದು. ಅಲ್ಲೇ ಅಲ್ಲವೇ ಕಥೆ ಹುಟ್ಟುವುದು!!
          

   

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...