Wednesday 3 November 2021

ನನಗೇಕೆ ಹೇಳುತ್ತೀರಿ?


 

ಕೆಲವರ ಫೋನ್ ಕರೆ ರಿಸೀವ್ ಮಾಡಲೂ ಹೆದರಿಬಿಡುತ್ತೇನೆ..

ಅವರು ಮಾತುಗಳು ದೀರ್ಘವಾಗಿರುತ್ತವೆ..ಅವರ ಸಂಸಾರದ ತಾಪತ್ರಯಗಳನ್ನೆಲ್ಲಾ ಹೇಳತಾ ಇರತಾರೆ.ಬಹುಶಃ ಅವಳು ನನ್ನನ್ನೇನಾದರೂ Dustbin ಅಂದುಕೊಂಡಿದಾಳೋ ಏನೋ! ತಂದು ತಂದು ಸುರೀತಾ ಇರತಾಳೆ! ಡಸ್ಟುಬಿನ್ನೂ ಕೂಡ ಒಂದು ದಿವಸ ತುಂಬಲೇಬೇಕಲ್ವಾ? ನಿನ್ನೆ ನನ್ನ ತಾಳ್ಮೆ ಕೊನೆಯಾಯಿತು!
ಇನ್ನೂ ಕೆಲವರಿರುತ್ತಾರೆ.ಅವರ ಫೋನುಗಳನ್ನು ರಾತ್ರಿಯ ಟೈಮಲ್ಲೇನಾದರೂ ರಿಸೀವ್ ಮಾಡಿದರೆ ಮುಗೀತು! ಕಂಠಪೂರ್ತಿ ಕುಡಿದು,ನನ್ನಂಥವರ ಜೀವ ತಿನ್ನುವ ಪಾಪಿಗಳು ಅವರು!
ಕೆಲವರು ತಮ್ಮ ದವಲತ್ತು-ಮೆಹನತ್ತುಗಳನ್ನು ಕೊಚ್ಚಿಕೊಳ್ಳೋಕೆ ಅಂತಾನೇ ಫೋನ್ ಮಾಡಿರತ್ತಾರೆ.ಅದನ್ನು ಕೇಳಿಸಿಕೊಳ್ಳುವ ಹರಕತ್ತು ನನಗಾದರೂ ಏನಿರುತ್ತೆ ಹೇಳಿ?
ಜನ ಯಾಕೆ ಹೀಗೆ ಮಾಡುತ್ತಾರೆ? ಗೊತ್ತಿಲ್ಲ!!
ಸಾಧ್ಯವಾದರೆ,ಒಂದು ಸಣ್ಣ ಖುಷಿಯನ್ನು ಹಂಚಿಕೊಳ್ಳಲು ಫೋನ್ ಮಾಡಿ.ಅದು ಹಬ್ಬಿ ಹಬ್ಬವಾದೀತು! ಒಂದು ಸಣ್ಣ ಸಹಾಯ ಬೇಕಿದ್ದರೆ ಫೋನ್ ಮಾಡಿ,ಅನುಕೂಲವಾದೀತು! ನಿಮ್ಮ ಮನಸ್ಸಿನ ರಾಡಿಗಳನ್ನು ,ನಿಮ್ಮ ಬದುಕಿನ ಕಲಗಚ್ಚನ್ನು ನನ್ನ ಹತ್ತಿರ ಸುರಿಯೋದಿಕ್ಕೆ ಹೋಗಬೇಡಿ! ದುಃಖ ಹಂಚಿಕೊಂಡರೆ ನಿರಾಳವಾಗುತ್ತೀರಿ ಅನ್ನುವ ನಿಮ್ಮ ಭ್ರಮೆಯಿಂದ ಹೊರಬನ್ನಿ!
It's my last reminder to you...ಇಷ್ಟಕ್ಕೂ ನಾನೂ ಮನುಷ್ಯನೇ ಅಲ್ವಾ?

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...