Wednesday 3 November 2021

ಆದಿಮ - "ಮ್ಯಾಸ ಬೇಡರು"







 

ಕಾಡುಗೊಲ್ಲ ಸಮುದಾಯದಂತೆಯೇ ಈ "ಮ್ಯಾಸಬೇಡ" ಸಮುದಾಯದಲ್ಲೂ ಅಸಂಖ್ಯ ಸಾಂಸ್ಕೃತಿಕ ವೀರರು ಬಾಳಿಹೋಗಿದ್ದಾರೆ. 
ಗಾದ್ರಿ ಪಾಲನಾಯಕ,ಕಾಟಮಲಿಂಗ,ಜಗಲೂರಜ್ಜ , ಕಂಪಳರಂಗ,ಪಾಪನಾಯಕ,ಸೂರ್ಯಪಾಪ ನಾಯಕ,ಕಲವೀರ,ಜಂಪಣ್ಣ...ಹೀಗೇ!!
ಇಲ್ಲೂ "ಪಶುಪಾಲನಾ ಸಂಸ್ಕೃತಿ" ಯ ಭೂಗರ್ಭದಲ್ಲೇ ಅವರ ಅಸ್ಮಿತೆಯ ಆಳವಿದೆ.ಅವರವೇ ಕುಲದ ಕಟ್ಟುಗಳಿವೆ.ಕುಣಿಯಲು ಹಬ್ಬಗಳಿವೆ. ನೆಲಮೂಲದ ಧೈವಗಳೇ ಇವರ ಬದುಕುಗಳನ್ನು ಇಲ್ಲಿಯವರೆಗೆ ಕಾಪಾಡುತ್ತಾ ಬಂದಿವೆ.
ಕಾಡುಗೊಲ್ಲ ಸಮುದಾಯದಲ್ಲಿದ್ದಷ್ಟು ಜನಪದ ಸಮೃದ್ಧಿ ಈ ಸಮುದಾಯದಲ್ಲಿಲ್ಲ. ಆದರೆ, ಕಾಡುಗೊಲ್ಲ ಜನಪದಗಳಲ್ಲೇ ಇವರ ಕಥನಗಳೂ ಮೇಳೈಸಿಬಿಟ್ಟಿವೆ.
ಆ ಪಶುಪಾಲನಾ ಸಂಸ್ಕೃತಿಯ ಪಳೆಯುಳಿಕೆಗಳು ಇಂದಿಗೂ ಉಳಿದಿವೆ. "ದೇವರ ದನಗಳ ಹಿಂಡು" ಗಳಿವೆ. ಅವುಗಳನ್ನು ಕಾಯಲಿಕ್ಕೆಂದೇ ತಲೆಮಾರಿನಿಂದ ಹುಟ್ಟಿದ ಕುಟುಂಬಗಳಿವೆ.ಅವರಿಗೆ ವಿಶೇಷ ಗೌರವಗಳಿವೆ. "ಮ್ಯಾಸಮಂಡಲ" ವು ಬರೀ 'ಬೇಟ ಸಂಸ್ಕೃತಿ'ಯದ್ದಲ್ಲ. ಬದುಕಿನ ಮೌಲ್ಯಗಳನ್ನು ಇಂದಿನ ತಲೆಮಾರಿನವರೆಗೂ ಕಾಪಿಟ್ಟುಕೊಂಡು ಬಂದಿರುವ ಕುಟುಂಬಗಳನ್ನು ನಾನು ನೋಡಿ ಅಚ್ಚರಿಪಟ್ಟದ್ದಿದೆ!

ಇಷ್ಟಕ್ಕೂ "ಆದಿಮ" ವೇ ಹಾಗೆ! ಅದರ ಹಾದಿಯು ನಮಗೆ ಅಗಮ್ಯ! ಅಗೋಚರ



 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...