Saturday 13 November 2021

Thats Friendship!!!


ಬೇಸರ ಕಳೆಯಲು ತನ್ನ ಜೊತೆ ಪಗಡೆಯಾಡಲು ಕರ್ಣನನ್ನು ಕರೆಯುತ್ತಾಳೆ ಭಾನುಮತಿ. ಕರ್ಣ ಸಮ್ಮತಿಸಿ, ಆಟಕ್ಕೆ ಪಣವೇನೆಂದು ಕೇಳುತ್ತಾನೆ. ಭಾನುಮತಿ ತನ್ನ ಕೊರಳ ಮುತ್ತಿನ ಸರ ಪಣವಿಡುತ್ತಾಳೆ ಕರ್ಣ ತನ್ನ ಕಿರೀಟವಿಡುತ್ತಾನೆ. ಆಟ ರಂಗೇರುತ್ತದೆ. ಕರ್ಣನ ಕೈ ಮೇಲಾಗುತ್ತದೆ. ಅದೇ ಕ್ಷಣಕ್ಕೆ ಎಲ್ಲೋ ಹೋಗಿದ್ದ ದುರ್ಯೋಧನನೂ ಬರುತ್ತಾನೆ.ಆಟಕ್ಕೆ ತೊಂದರೆಯಾಗದಂತೆ ನೋಡುತ್ತ ಮರೆಯಲ್ಲಿಯೇ ನಿಲ್ಲುತ್ತಾನೆ.
ಗೆದ್ದೇ ಬಿಡುತ್ತಾನೆ ಕರ್ಣ. ಪಣವಿಟ್ಟ ಮುತ್ತಿನ ಸರ ಕೇಳುತ್ತಾನೆ. ಭಾನುಮತಿ ನಿರಾಕರಿಸುತ್ತಾಳೆ. 'ನಮ್ಮ ಊಳಿಗದ ತೊತ್ತಲ್ಲವೇ ನೀನು' ಎಂದು ಅಪಮಾನಿಸುತ್ತಾಳೆ. ಕರ್ಣ ಅವಳ ಕೊರಳ ಸರಕ್ಕೇ ಕೈ ಹಾಕುತ್ತಾನೆ. ಸರ ಹರಿಯುತ್ತದೆ.ಮುತ್ತುಗಳೆಲ್ಲಾ ನೆಲದಲ್ಲಿ ಹರಡುತ್ತವೆ.
ಮರೆಯಲ್ಲಿದ್ದ ದುರ್ಯೋಧನ ಕ್ರುಧ್ರನಾಗಿ, ಸೊಕ್ಕಿನ ಹೆಂಡತಿಯ ಕಪಾಳಕ್ಕೆರಡು ಬಿಗಿಯುತ್ತಾನೆ. ಹರಡಿದ ಮುತ್ತುಗಳೆಡೆ ಬಾಗಿ ಕೇಳುತ್ತಾನೆ... "ಮುತ್ತುಗಳನ್ನಾಯ್ದು ಕೊಡಲೇ ಕರ್ಣಾ?"

That's friendship!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...