Saturday 13 November 2021

ಸುಖಾ ಅಂದರಾ....


 ಇಲ್ಯಾರೋ ಒಬ್ಬರು "ಬರೀ ಖುಷಿಯಾಗಿದ್ದರೆ,ಲೈಫು ಹೆಣಾ ಬೋರು ಕಣ,ಲೈಫಲ್ಲಿ ಅಳು,ದುಃಖ,ತಮಾಷೆ,ಜಗಳ,ದ್ವೇಷ,ಹೊಡೆದಾಟ..ಎಲ್ಲವೂ ಇದ್ದರೇನೆ ಚಂದ" ಅಂದರು! ಹಂಗೇ ಆಗಲಿ ತಾಯಿ..ಒಪ್ಪಿದೆ. 🙏🙏

ನಾನು ಹೇಳಿದ್ದು ....

ಖುಷಿಯನ್ನು ಹುಡುಕಿಕೊಂಡು ಅಲೆದಾಡುವವರ ಬಗ್ಗೆ.ಅಲ್ಪತೃಪ್ತರು,ಅತೃಪ್ತರ ಬಗ್ಗೆ! ಮನೆ ಕಟ್ಟಿಸೋ ಖುಷಿಗೆ,ಜೀವನದ ಖುಷಿಗಳನ್ನೆಲ್ಲಾ ಬಿಟ್ಟುಹಾಕಿ,ದುಡಿದು,ಸಾಲ ಮಾಡಿ,ಕೊನೆಗೆ ಅಲ್ಲಿ ವಾಸ ಮಾಡುವ ಕಾಲಕ್ಕೆ ಹಣ್ಣುಗಾಯಿಯಾಗಿರುತ್ತಾರೆ! 

ಒಂದೇನುಗೊತ್ತಾ? "ಸುಖ"- ಅನ್ನುವುದೊಂದು ಮಾನಸಿಕ ಸ್ಥಿತಿಯಷ್ಟೇ! ಎ.ಸಿ.ರೂಮಲ್ಲಿ ಕುರ್ಲಾನ್ ಬೆಡ್ಡಲ್ಲಿ ಮಲಗುವ ಸುಖದಷ್ಟೇ..ರಂಟೆ ಹೊಡೆದ ಹೊಲದ ಮಧ್ಯದ ಮಾವಿನ ಮರದ ನೆರಳಲ್ಲಿ ಮಲಗುವ ಸುಖ! ವ್ಯತ್ಯಾಸವಿಲ್ಲ.

ಮಳೆಯಿಲ್ಲದೇ ಪೈರು ಒಣಗಿ,ಕೊನೆಗೆ ಯಾವಗೋ ಬಂದ ನಾಲ್ಕು ಹನಿಗೆ ಬೆಳೆದ ಪೈರಿನ ತೆನೆ ಕೈಯಲ್ಲಿ ಹಿಡಿದು ಆ ಮುದಿ ರೈತನೊಬ್ಬ ಅನುಭವಿಸುವ ಧನ್ಯತೆಗೆ ಹೋಲಿಕೆಯಿಲ್ಲ!

ತಿನ್ನಲು ಏನೂ ಇಲ್ಲದ ದೈನೇಸಿ ಮಗುವಿನ ಕೈಗೆ ಒಣಗಿ ಹೆಟ್ಟೆಯಾದ ರೊಟ್ಟಿ ತುಂಡು ಸಿಕ್ಕು , ಅದನ್ನೇ ಪ್ರೀತಿಯಿಂದ ತಿಂದು ಹಗುರವಾಗಿ ತೇಗುವ ಸದ್ದಿಗೆ ಹೋಲಿಕೆಯಿಲ್ಲ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...