Saturday 13 November 2021

ಕಾಶ್ಮೀರದ ಬಗ್ಗೆ...



 ಕಾಶ್ಮೀರ ಮತ್ತೆ ಮುನ್ನೆಲೆಗೆ ಬಂದಿದೆ.ಹಿಂದೂ ನಿರಾಶ್ರಿತರನ್ನು ಪುನಃ ಅಲ್ಲಿ ನೆಲೆಗೊಳಿಸುವ ಪ್ರಯತ್ನಗಳಾಗುತ್ತಲಿವೆಯಂತೆ.ತಮ್ಮ ಪೂರ್ವಿಕರ ಆ ಸೇಬಿನ ತೋಟ,ಕೇಸರಿ ಬೆಳೆವ ಹೊಲಗಳಲ್ಲಿ ಮತ್ತೆ ಆ ನಿಷ್ಪಾಪಿ ಪಂಡಿತರು ಬೆವರು ಹರಿಸುವೆವೆಂಬ ಕನಸು ಕಾಣುತ್ತಿದ್ದಾರೆ. Al-Jazeera ಚಾನೆಲ್ ನಲ್ಲಿ ನಿನ್ನೆ ಅಲ್ಲಿನ ಸೂಫಿ ಮುಸ್ಲಿಮರ ಧಾರುಣ ಸ್ಥಿತಿಯ ಬಗ್ಗೆ ಡಾಕ್ಯುಮೆಂಟರಿ ನೋಡಿದೆ. ಧರ್ಮದ ಅಫೀಮು ತಲೆಗೇರಿಸಿಕೊಂಡರೆ,ಮೊದಲು ಬಲಿಯಾಗುವುದು ಅದೇ ಧರ್ಮದ ಬಡವರು,ಶೋಷಿತವರ್ಗದವರು! ಕಟ್ಟರ್ ಇಸ್ಲಾಮೀತನವು ಉದಾರೀತನದ,ಭಾವೈಕ್ಯ ಭಕ್ತಿಪರಂಪರೆಯ ಸೂಫಿಸಂ ನ್ನು ಸೇರುವುದಿಲ್ಲ. ಪಾಕಿಸ್ತಾನದ ಅನೇಕ ಸೂಫಿ ಹಾಡುಗಾರರಿಗೆ ಈಗಲೂ ಜೀವಭಯ ತಪ್ಪಿಲ್ಲ.ಅವರಿಗೆ ಭಾರತದಲ್ಲಿ ಇರುವಷ್ಟು ಗೌರವ ಅಲ್ಲಿಲ್ಲ.
ವರ್ಗಸಂಘರ್ಷವು ಎಲ್ಲಾ ಧರ್ಮಗಳಲ್ಲೂ ಇದ್ದದ್ದೇ. ಇಸ್ಲಾಮಿಗೂ ಒಬ್ಬ ಅಂಬೇಡ್ಕರ್ ಹುಟ್ಟಬೇಕಿತ್ತು!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...