Saturday 13 November 2021

ಅಂಬೇಡಕರ್ ಮತ್ತು ಸಾವರಕರ್...


 ನಿನ್ನೆಯಿಂದಲೂ ನನ್ನ ಗೆಳೆಯರೇನಕರು "ಸಾವರ್ಕರ್" ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾವರ್ಕರ್ ರನ್ನು ಓದಿಕೊಂಡ ನನಗೆ ಅವರ "ಹಿಂದುತ್ವ" ದ ಬಗೆಗೆ ಸ್ಪಷ್ಟತೆಯಿದೆ. ಆ ಕಾಲಘಟ್ಟದಲ್ಲಿ ಆ ಚಿಂತನೆಯು ಮೈದಳೆದ ಹಿನ್ನೆಲೆ,ಆಗ ಮತ್ತು ಪ್ರಸಕ್ತ ವರ್ತಮಾನದಲ್ಲಿ ಅದು ಸಮಾಜದಲ್ಲಿ ಎಬ್ಬಿಸಿದ ತಲ್ಲಣಗಳು,ಭವಿಷ್ಯದಲ್ಲಿನ ಅದರ ಅಸಂಗತತೆಯ ಅರಿವೂ ನನಗಿದೆ. Yes..It's a Complete Bullshit!!

ಕಳೆದ ತಿಂಗಳಿನಿಂದಲೂ ಅಂಬೇಡ್ಕರ್ ರ ಸಮಗ್ರ ಬರಹ-ಭಾಷಣಗಳ ಸಂಪುಟಗಳ ಓದುಮುಗಿಸಿದ್ದೇನೆ. ಬಹುಶ

ಬರೋಬ್ಬರಿ 35 ಸಂಪುಟಗಳ ಮಹಾ ಸರಣಿ ಇದು.(ಆಸಕ್ತರಿಗೆ ಕೇಳಿದರೆ ಕಳಿಸಬಲ್ಲೆ) ಭಾರತೀಯ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ರ ಅಸ್ಖಲಿತ ಸ್ಪಷ್ಟತೆ ನನಗೆ ಬೆರಗುಮೂಡಿಸಿದೆ.

ಹಿಂದುತ್ವದ ಬಗೆಗಿನ ಅವರ ನಿಲುವು,ಕಮ್ಯುನಿಸಂ ಅನ್ನು ಅವರು ಸಾರಾಸಗಟು ತಿರಸ್ಕರಿಸಿದ ರೀತಿ,ಭಾರತದ ಸಮಾಜವನ್ನು ಸಮಾಜವಾದೀ ನೆಲೆಯಲ್ಲಿ ಹೇಗೆ ಕಟ್ಟಬಹುದೆನ್ನುವುದರ ಬಗೆಗಿನ ಅವರ ಕನಸು...ಹೃದಯ ತಟ್ಟುತ್ತವೆ.

ಅಂಬೇಡ್ಕರ್ ಯಾಕೆ ಎಲ್ಲರಿಗಿಂತಲೂ ಎತ್ತರ ನಿಲ್ಲುತ್ತಾರೆ ಎಂಬುದಕ್ಕೆ ನಾನು ಸಾವಿರ ಕಾರಣ ಕೊಡಬಲ್ಲೆ. ಸಾವರ್ಕರ್ ರ 'ಹಿಂದುತ್ವ' ಎನ್ನುವ ಪೊಳ್ಳುತನದ,ಕುತ್ಸಿತ ಚಿಂತನೆಯ ಹಿಂದೆ ಈಗಿನ ತರುಣವರ್ಗವು ಬೀಸುಗಾಲಿನ ಹೆಜ್ಜೆ ಹಾಕುವ ಪರಿಯೇ ಭಾರತಕ್ಕೆ ಅಪಾಯಕಾರಿ! ಈ 'ಸನ್ನಿ'ಗೆ ಅಂಬೇಡ್ಕರ್ ರೇ ಪರಿಹಾರ!

ಅಂಬೇಡ್ಕರ್ ರನ್ನು ಓದಿಕೊಳ್ಳಿ...ಆಮೇಲೆ ಬೇಕಾದರೆ ಜೈಶ್ರೀರಾಂ ಅನ್ನಿ!! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...