Saturday 13 November 2021

ಭಂಡಾರಿಯವರು ಹೇಳಿದ್ದು....


 ಸಂಘಪರಿವಾರದ ನನ್ನ ಗುರುಗಳಾದ ಚಂದ್ರಶೇಖರ ಭಂಡಾರಿಯವರ ಜೊತೆ ಮಾತಾಡುತ್ತಿದ್ದಾಗೊಮ್ಮೆ ಹೇಳಿದ್ದರು.

'ಸಂಘ ಸ್ಥಾಪನೆಯಾದಾಗಿನ ಸನ್ನಿವೇಶಕ್ಕೂ ಪ್ರಸಕ್ತ ಕಾಲಘಟ್ಟಕ್ಕೂ ಅಗಾಧ ವ್ಯತ್ಯಾಸವಿದೆ.ಕಾಲದ ಜೊತೆ ಹೆಜ್ಜೆಹಾಕಲು ಸಂಘಕ್ಕೆ ಸಾಧ್ಯವಾಗಲಿಲ್ಲ.ರಾಜಕೀಯದ ಒತ್ತಡ-ಪ್ರಭಾವಗಳೇ ಅದಕ್ಕೆ ತೊಡಕಾದವು.ಈಗಲೂ ಸಂಘದಲ್ಲಿ ಜಾತೀಯತೆ ಇದೆ. ಸಂಘವು ಸಾಮಾಜಿಕ ಆಂಧೋಲನದ ಸ್ವರೂಪ ತಾಳಬೇಕಿತ್ತೇ ಹೊರತು ರಾಜಕೀಯ ಶಕ್ತಿಯಾಗಿ ಬೆಳೆವ ಅಗತ್ಯ ಅದಕ್ಕಿರಲಿಲ್ಲ.'

ಅವರ ಮಾತಿನಲ್ಲಿ ಸತ್ಯವಿತ್ತು. ಒಬ್ಬ ರಾಜೇಂದ್ರಸಿಂಗ್ ರನ್ನು ಬಿಟ್ಟು ಬೇರೆ ಬ್ರಾಹ್ಮಣೇತರ ವ್ಯಕ್ತಿಯನ್ನು ಸಂಘ ಬೆಳೆಸಲಿಲ್ಲ. ರಾಜಾಜೀ ಅದಕ್ಕಾಗಿ ಸಾಕಷ್ಟು ಹಿಂಸೆ-ಅಪಮಾನ ಅನುಭವಿಸಿದ್ದರು. ಇಷ್ಟಾಗಿಯೂ ಸಂಘ ನನಗೆ ಅಪ್ಯಾಯಮಾನವೆನಿಸುವುದು ಒಂದೇ ಕಾರಣಕ್ಕೆ. ಅದು ಅದರ "ಕಠೋರ ಅನುಶಾಸನ"! ಸಂಘದಿಂದ ಕಲಿತದ್ದು ಬಹಳ..ಕಲಿಯಬೇಕಿರುವುದೂ ಇದೆ. ಇದೊಂದು ರೀತಿಯಲ್ಲಿ ಕಲ್ಲಿನಲ್ಲಿ ಕಾಳು ಆರಿಸುವ ಪ್ರಕ್ರಿಯೆ!!

ಆರಿಸಿಕೊಳ್ಳುತ್ತಿದ್ದೇನೆ... ಸಿಕ್ಕಷ್ಟು ಕಾಳುಗಳನ್ನು ಆ ಅಗಾಧ ಕಲ್ಲಿನ ರಾಶಿಯಲ್ಲಿ!!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...