Saturday 20 November 2021

ಹಾದಿ - ೩


 ನಾಳೆ ಎನ್ನುವುದು

ಒಡೆದು ಓದದ ಕಾಗದ!

ನಿನ್ನೆ ಎನ್ನುವುದು

ನಾಲಗೆಯಲ್ಲಿ ಉಳಿದ

ವಿಸ್ಮಯದ ಘಮಲು!

ಮತ್ತು ಇಂದು ಎನ್ನುವುದು ;

ಮನದೊಳಗಣದ ಭಿತ್ತಿ!

ಕೆತ್ತಿದ ಕ್ಷಣಗಳೆಲ್ಲವೂ ಗತ!

ನೆನಪ ಬೀಜಗಳ ಕ್ಷತ-ಅಕ್ಷತ ಪಥ!

ಚಿಗುರೊಡೆದರೆ,ನಿನಗೆ ದಾರಿ!

ಮುರುಟಿ ಸತ್ತರೆ,ನನ್ನದೇ ದಾರಿ!

ಹೌದು,ಅದೇ 'ಹೆಜ್ಜೆ ಮೂಡದ ದಾರಿ'!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...