Thursday 28 October 2021

ಕಾಲ ಭೈರವ


 ಬಹುಶಃ ಬೆಳಗಿನ ಜಾವ 3 ಗಂಟೆಯಿರಬಹುದು.ಆಗಷ್ಟೇ ನನಗೆ ನಿದ್ರೆ..ಆಗಲೇ ಈ ಶಂಖನಾದ,ನಿವೃತ್ತಿಯ ಘಂಟೆಯ ನಾದದ ಜೊತೆಗೆ "ಹರಾ ಹರಾ ಶಂಕರಾ..ಶಿವ ಶಿವಾ ಶಂಭೋ! ಹಂಕಾರ ಓಂಕಾರ ಮಮಕಾರ ಶಂಭೋ!" ಎಂಬ ಕಂಚಿನ ಕಂಠದ ಅಸ್ಖಲಿತ ವಾಣಿಯ ನಿರಂತರ ದನಿ ಕೇಳಿತ್ತು! ಅದೊಂದು ರೀತಿಯ ಮರಣ ಸದೃಶ ಝೇಂಕಾರ! ಆ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಶಂಖ ಜಾಗಟೆಯ ದನಿಗೆ ಮನಸ್ಸು ಕಲ್ಲವಿಲಗೊಂಡಿತ್ತು!

‌‌‌‌ಊರೆಲ್ಲಾ ನಿದ್ದೆಯ ಹೊದ್ದ ನೀರವದಲ್ಲಿದ್ದಾಗ ಇದ್ಯಾವುದೆಂದು ಎದ್ದು ಹೊರಬಂದು ಕಣ್ಣುಜ್ಜಿಕೊಳ್ಳುತ್ತಾ ದಿಟ್ಟಿಸಿದೆ. ರಾತ್ರಿಯಿಡೀ ಸ್ಮಶಾನ ಕಾಯ್ದು ಬೆಳಗಿನ ಜಾವಕ್ಕೆ ಊರನ್ನು ಶಕ್ತಾಷ್ಠ ದಿಗ್ಭಂಧನ ಮಾಡುತ್ತಲಿದ್ದ "ಸುಡುಗಾಡು ಸಿದ್ಧ"! ಸಾಕ್ಷಾತ್ ಕಾಲಭೈರವನಂತೆ ಆ ಕಗ್ಗತ್ತಲಲ್ಲಿ ಕಂಗೊಳಿಸಿದ್ದ! ನನಗರಿವಿಲ್ಲದೆ ನನ್ನೆರಡೂ ಕೈಗಳನ್ನೂ ಜೋಡಿಸಿದ್ದೆ!
ಅವನು ಮಾತ್ರ ಯಾವುದರ ಪರಿವೆಯಿಲ್ಲದವನಂತೆ,ಬೊಗಳುತ್ತಲಿದ್ದ ನಾಯಿಗಳೆಡೆಯೂ ನೋಡದೆ,ನಿರ್ವಿಕಾರನಾಗಿ ಊರು ಪಂಕ್ತಿಗಟ್ಟುತ್ತಿದ್ದ! ಬೆಳಗಿನ ಮುಷ್ಠಿ ಕಾಳನ ಭಿಕ್ಷೆಗಾಗಿ ತನ್ನ ತಲೆಮಾರಿನ ಕಾಯಕದಲ್ಲಿ ಯೋಗನಿಷ್ಠನಾಗಿದ್ದ!
ಅಮರೇಶ ನುಗಡೋಣಿಯವರ " ಕನಸೆಂಬೋ ಕುದುರೆಯನೇರಿ" ಕಥೆಯೂ ಕೂಡ ನೆನಪಿಗಿ ಬಂದದ್ದು ಆಗಲೇ! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...