Sunday 24 October 2021

ಜನ

ಇಲ್ಲಿ ಎಲ್ಲರ ಎದೆಯಲ್ಲೂ ದಹಿಸುವ ಬೆಂಕಿ, ತುಟಿಗಳಲ್ಲಿ ಮಾತ್ರ ಹೂವಿನ ಎಸಳು! ಆದರೆ, ಮುಖದ ಮೇಲೊಂದು ಕೃತಕ ನಗು! ಮಾತುಗಳೆಂದೂ ಹೃದಯದಿಂದ ಬರುವುದಿಲ್ಲ. ಅವರ ನಗುವಿನಷ್ಟೇ ಕಣ್ಣೀರೂ ಕೂಡ ವಿಷವೇ! ಆದರೂ ಅವರ ಹೆಣಕ್ಕೆ ಹೆಗಲಾಗಲು ನೂರು ಜನ! ಪಿಂಡ ತಿನ್ನಲು ಬಂದ ಕಾಗೆಗೋ ಹಿಂಜರಿಕೆ! ಭೂಮಿಗೂ ಹೇಸಿಗೆ,ಅವರಿಗೆ ಮಡಿಲಾಗಲು..! ಕಾಲಕ್ಕೆ ಮಾತ್ರ, ಅದೆಂಥದ್ದೋ ಧಾವಂತ... ಇವರನ್ನು ಹೊತ್ತು ಮೆರೆಸಲು..ಕೊಂದು ಮುಗಿಸಲು!

ಇಲ್ಲಿ ಎಲ್ಲರ ಎದೆಯಲ್ಲೂ ದಹಿಸುವ ಬೆಂಕಿ,

ತುಟಿಗಳಲ್ಲಿ ಮಾತ್ರ ಹೂವಿನ ಎಸಳು!

ಆದರೆ, ಮುಖದ ಮೇಲೊಂದು ಕೃತಕ ನಗು!

ಮಾತುಗಳೆಂದೂ ಹೃದಯದಿಂದ ಬರುವುದಿಲ್ಲ.

ಅವರ ನಗುವಿನಷ್ಟೇ ಕಣ್ಣೀರೂ ಕೂಡ ವಿಷವೇ!

ಆದರೂ ಅವರ ಹೆಣಕ್ಕೆ ಹೆಗಲಾಗಲು ನೂರು ಜನ!

ಪಿಂಡ ತಿನ್ನಲು ಬಂದ ಕಾಗೆಗೋ ಹಿಂಜರಿಕೆ!

ಭೂಮಿಗೂ ಹೇಸಿಗೆ,ಅವರಿಗೆ ಮಡಿಲಾಗಲು..!

ಕಾಲಕ್ಕೆ ಮಾತ್ರ, ಅದೆಂಥದ್ದೋ ಧಾವಂತ...

ಇವರನ್ನು ಹೊತ್ತು ಮೆರೆಸಲು..ಕೊಂದು ಮುಗಿಸಲು!

 


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...