Tuesday 26 October 2021

ಕತ್ತಲು


 ದಾರಿ ತಪ್ಪಿಸುವ ಬೆಳಕಿಗಿಂತ

ಆತ್ಮಕ್ಕಂಟಿದ ಕತ್ತಲೆಯೇ

ಅದೆಷ್ಟೋ ಬಾರಿ ನಂಬಿಗಸ್ತವೆನಿಸುತ್ತದೆ.

ಬೆಳಕಿಗಷ್ಟೇ ಬೆತ್ತಲೆಯ ಭಯ

ಕತ್ತಲು,ಭಯ ಮೀರಿದ ಅಭಯ!

ಬೆಳಕು ಜೀವಗಳನ್ನು ಕೊಂದರೆ,

ಕತ್ತಲು,ಹುಟ್ಟಿಸುತ್ತಾ ಹೋಗುತ್ತದೆ.

ಕನಸುಗಳೂ ಕತ್ತಲಲ್ಲೇ ಹುಟ್ಟುತ್ತವೆ

ಬೆಳಕಿನಲ್ಲಿ ಅಸು ನೀಗುತ್ತವೆ.

ಬೆಳಕು ಎಲ್ಲರಿಗೂ ದಕ್ಕಲಾರದು

ಕತ್ತಲು, ಯಾರನ್ನೂ ದೂರವಿಡದು.

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...