Monday 25 October 2021

ಮೌನದ ಮಾತು.. -೧

 ಮೋಸ ಮತ್ತು ಸಾವು..ಇವೆರಡನ್ನೂ ಎದುರಿಸಿದವನ ಮಾತುಗಳು ಕ್ಷಣಕಾಲ ಸತ್ತುಬಿಡುತ್ತವೆ. Isolate ಮಾಡಿಬಿಡುತ್ತವೆ. ತುಂಬಾ ನಂಬಿದವರು ಮಾಡುವ  ನೋವು ಅಸಹನೀಯ. ಕ್ಷುಲ್ಲಕ ಕಾರಣಗಳಿಗೆ ನಂಬಿಕೆಯನ್ನೇ ಕತ್ತು ಹಿಸುಕುವ ಆ ಸಣ್ಣತನಗಳು ಜಿಗುಪ್ಸೆ ಹುಟ್ಟಿಸಿಬಿಡುತ್ತವೆ. ನಾನು ಪ್ರತೀಬಾರಿ ಮೋಸಹೋದಾಗಲೂ ಆ ಸಣ್ಣತನಗಳನ್ನು ಮರೆಯಲೆತ್ನಿಸುತ್ತೇನೆ. "ಜಗತ್ತೇ ಹೀಗಲ್ಲವೇ ಇರೋದು..ಅಂಥದ್ದರಲ್ಲಿ ಈ ತೋಲಪ್ಪಗಳದ್ಯಾವ ಲೆಕ್ಕಬಿಡು ಎಂದು ಉಪೇಕ್ಷಿಸುತ್ತೇನೆ.

             ಆದರೆ, ಈ 'ಸಾವು' ಹಾಗಲ್ಲ. ಅದು ಎಂದೂ ತುಂಬದ ನಿರ್ವಾತವೊಂದನ್ನು ನಿರ್ಮಿಸಿಬಿಡುತ್ತದೆ. ಅದರಲ್ಲೂ ಹತ್ತಿರದವರ ಸಾವು...ಭರಿಸಲಾರದ್ದು!

ಕಳೆದ ಒಂದು ತಿಂಗಳಿನಿಂದಲೂ ಮನಸ್ಸು ಹಣ್ಣುಗಾಯಿಯಾಗಿದೆ.

ಬದುಕನ್ನು ಕಾಲದ ಸುಫರ್ದಿಗೆ ಬಿಟ್ಟು ನಿರ್ವಿಣ್ಣನಾಗಿದ್ದೇನೆ. ಮುಂದೆ ಕಾಣುತ್ತಿರುವುದು ಸೂರ್ಯೋದಯವೋ ಸೂರ್ಯಾಸ್ತವೋ...ಕಾಲಪುರುಷನಿಗೆ ಮಾತ್ರವೇ ಗೊತ್ತು!


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...