Monday 25 October 2021

ರಸ್ತೆಗೆ ಬಂದ ಉಣ್ಣುವ 'ಗಂಗಾಳ'!


 ರೈತನ ಉಣ್ಣುವ ಗಂಗಳವೀಗ ರಸ್ತೆಯ ಮೇಲೆ ಬಂದುಬಿಟ್ಟಿದೆ. ರಸ್ತೆಗಳ ಮೇಲೆಲ್ಲಾ ಕಾಳು..ಕಣಗಳೆಲ್ಲಾ ಸುರಿವ ಹಾಳು!

ಆ ಕಡೆ ರಾಜಧಾನಿ ದೆಹಲಿಯಲ್ಲಿ APMC ಕಾಯ್ದೆ ತಿದ್ದುಪಡಿಯ ವಿರುದ್ಧ ನಿಂತ ರೈತ ಹೋರಾಟಗಾರರೆಲ್ಲರೂ ಆ ಮೈನಸ್ ಚಳಿಯಲ್ಲಿ ದೆಹಲಿಯ ರಸ್ತೆಗಳಲ್ಲೇ ಉಂಡು ಮಲಗುತ್ತಿದ್ದಾರೆ.

           ಹೆಗ್ಗೋಡಿನ ಪ್ರಸನ್ನ ಅವತ್ತೊಮ್ಮೆ ನನಗೆ "ರೈತನ ದೇಹವಷ್ಟೇ ಅಲ್ಲ..ಮನಸ್ಸೂ ಕೂಡ ಸೋಮಾರಿಯಾಗಿದೆ. ಯಂತ್ರಜಗತ್ತಿನ ಮೊದಲ ಬಲಿ ಅವನೇ! ಇದರಿಂದ ಹೊರಬರದ ಹೊರತು ಅವನಿಗೆ ಉಳಿಗಾಲವಿಲ್ಲ" ಅಂದಿದ್ದರು. ಅದು ನಿಜವೇನೋ ಅನಿಸಹತ್ತಿದೆ.

          ಸುಗ್ಗಿಕಾಲದ ಹಂತಿಪದಗಳೆಲ್ಲವೂ ರಸ್ತೆಯ ಮೇಲಿನ ವಾಹನಗಳ ಟೈರಿನಡಿ ಸಿಕ್ಕ ಕಾಳಿನಂತೆ, ರಾಸಿ ಪೂಜೆಯು ಮಗ್ಗುಲ ಧೂಳರಾಸಿಯಲ್ಲಿ ಮರೆಯಾದಂತೆ..ರೈತನ ಅನ್ನದ ತಟ್ಟೆಯಲ್ಲಿ ನಿಜವಾದ ಶ್ರಮದ ಅನ್ನವೇ ಮರೆಯಾಗಿ ಯಾವುದೋ ಕೆಮಿಕಲ್ ಮಿಶ್ರಣವಾಗಿ ರೂಪಾಂತರವಾದಂತೆ...ಭ್ರಮೆಯೋ ಭ್ರಮಾನಿರಸನವೋ ಆ ಭೂತಾಯಿಯೇ ಹೇಳಬೇಕು!

        ಕಾಳು ತೂರುವ ರೈತ ಮಹಿಳೆ  "ಹುಲುಗ್ಯೋ ಹುಲುಗ್ಯೋ"ಎಂದು ಬೀಸುವ ಗಾಳಿಗೇ ಆಜ್ಞಾಪಿಸುತ್ತಿದ್ದ ಗರತಿಯ ಗೈರತ್ತುಗಳು ಒಡೆದ ಬಳೆಗಳಂತೆ,ಬರಿ ಹಣೆಯಂತೆ ವೈಧವ್ಯಕ್ಕೆ ತುತ್ತಾಗಿವೆ. 

    ಹೌದು...'ಭೂಮಿತಾಯಿ' ಅಂಬಾಕಿ ಈಗ ಒಬ್ಬ ಹುಚ್ಚು ರಂಡೆ ಮಾತ್ರ ಕಣ್ರೀ!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...