ಹುಣ್ಣಿಮೆಯಾಗಸದಲ್ಲಿ
ಬೆಳದಿಂಗಳು ಬರಿದಾದ ದಿನ..
ಕಣ್ಣೆವೆಗಳ ತುದಿಯಂಚಲ್ಲಿ..
ಜಿನುಗುವ ತೊರೆ ಬತ್ತಿದ ದಿನ..
ನಿನ್ನ ಬೊಗಸೆಗೆ ಚುಕ್ಕೆಗಳ ಬದಲಿಗೆ
ಉರಿವ ಉಲ್ಕೆಗಳು ಉದುರಿದ ದಿನ..
ನಾನಿಟ್ಟ ಬದುಕಿನ ಹೆಜ್ಜೆಗಳೆಲ್ಲಾ
ನನ್ನ ಹಿಂದೆಯೇ ಓಡಿಬಂದು ಸತ್ತ ದಿನ..
ನನ್ನ ಕನಸುಗಳೆಲ್ಲವೂ ನಿನ್ನ ಕಾಲಡಿ
ಬಿದ್ದು ಒದ್ದಾಡಿ ಉಸಿರುಗಟ್ಟಿ ಸತ್ತ ದಿನ..
ನಾನಿಲ್ಲವೆಂದುಕೋ..ನನ್ನ ಶ್ರಾದ್ಧ ಮಾಡಿಕೋ..!
Saturday, 23 October 2021
ನನ್ನ ಶ್ರಾದ್ಧ ಮಾಡಿಕೋ
Subscribe to:
Post Comments (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...

-
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೆಲವೊಂದು ಸಿನಿಮಾಗಳು, ಇಡೀ ಮನಸ್ಸನ್ನು ಆವರಿಸಿಬಿಡುತ್ತವೆ. ಬಹುಕಾಲ ಕಾಡುತ್ತಲೇ ಇರುತ್ತವೆ. ತಲ್ಲಣಗಳನ್ನು ಎಬ್ಬಿಸಿ,ಆಳವನ್ನು ತಾಕುತ್ರವೆ. ನಾನು ತುಂಬಾ ಹಚ್ಚಿಕೊಂಡ...
-
ಕವಿತೆಯೇ... ನೀನೀಗ ನನಗೆ ಮಜಾ ಅಲ್ಲ. ನೀನೇನು ನನಗೆ ಖಯಾಲಲ್ಲ. ನಿನ್ನನ್ನೇನು ನೂರು ಜನ ಓದಬೇಕಿಲ್ಲ. ಓದಿದವರೆಲ್ಲ ನನಗೆ ಹೇಳುವ ಭೋಪರಾಕುಗಳಿಂದ ಆಗಬೇಕಾದ್ದೇನಿಲ್ಲ. ನ...
No comments:
Post a Comment