ಹುಣ್ಣಿಮೆಯಾಗಸದಲ್ಲಿ
ಬೆಳದಿಂಗಳು ಬರಿದಾದ ದಿನ..
ಕಣ್ಣೆವೆಗಳ ತುದಿಯಂಚಲ್ಲಿ..
ಜಿನುಗುವ ತೊರೆ ಬತ್ತಿದ ದಿನ..
ನಿನ್ನ ಬೊಗಸೆಗೆ ಚುಕ್ಕೆಗಳ ಬದಲಿಗೆ
ಉರಿವ ಉಲ್ಕೆಗಳು ಉದುರಿದ ದಿನ..
ನಾನಿಟ್ಟ ಬದುಕಿನ ಹೆಜ್ಜೆಗಳೆಲ್ಲಾ
ನನ್ನ ಹಿಂದೆಯೇ ಓಡಿಬಂದು ಸತ್ತ ದಿನ..
ನನ್ನ ಕನಸುಗಳೆಲ್ಲವೂ ನಿನ್ನ ಕಾಲಡಿ
ಬಿದ್ದು ಒದ್ದಾಡಿ ಉಸಿರುಗಟ್ಟಿ ಸತ್ತ ದಿನ..
ನಾನಿಲ್ಲವೆಂದುಕೋ..ನನ್ನ ಶ್ರಾದ್ಧ ಮಾಡಿಕೋ..!
Saturday 23 October 2021
ನನ್ನ ಶ್ರಾದ್ಧ ಮಾಡಿಕೋ
Subscribe to:
Post Comments (Atom)
ಜನ-ಜಾಣತನ
"ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ ಅಂಗಡಿಯಲ...
-
ಸಣ್ಣವನಿದ್ದಾಗ ನನ್ನೂರಿಗೊಬ್ಬ 'ಕಲಾಯಿಸಾಬಿ' ಬರುತ್ತಿದ್ದ. ಒಮ್ಮೆ ಬಂದರೆ ವರ್ಷಗಟ್ಟಲೆ 'ಪೀರಲಸ್ವಾಮಿ'ಗುಡಿಯಲ್ಲೇ ಉಳಿಯುತ್ತಿತ್ತು ಅವನ ಕುಟುಂಬ. ಅವ...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...
-
ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು! ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧ...
No comments:
Post a Comment