Saturday 23 October 2021

ನನ್ನ ಶ್ರಾದ್ಧ ಮಾಡಿಕೋ


 

ಹುಣ್ಣಿಮೆಯಾಗಸದಲ್ಲಿ
ಬೆಳದಿಂಗಳು ಬರಿದಾದ ದಿನ..
ಕಣ್ಣೆವೆಗಳ ತುದಿಯಂಚಲ್ಲಿ..
ಜಿನುಗುವ ತೊರೆ ಬತ್ತಿದ ದಿನ..
ನಿನ್ನ ಬೊಗಸೆಗೆ ಚುಕ್ಕೆಗಳ ಬದಲಿಗೆ
ಉರಿವ ಉಲ್ಕೆಗಳು ಉದುರಿದ ದಿನ..
ನಾನಿಟ್ಟ ಬದುಕಿನ ಹೆಜ್ಜೆಗಳೆಲ್ಲಾ
ನನ್ನ ಹಿಂದೆಯೇ ಓಡಿಬಂದು ಸತ್ತ ದಿನ..
ನನ್ನ ಕನಸುಗಳೆಲ್ಲವೂ ನಿನ್ನ ಕಾಲಡಿ
ಬಿದ್ದು ಒದ್ದಾಡಿ ಉಸಿರುಗಟ್ಟಿ ಸತ್ತ ದಿನ..
ನಾನಿಲ್ಲವೆಂದುಕೋ..ನನ್ನ ಶ್ರಾದ್ಧ ಮಾಡಿಕೋ..!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...