Monday 25 October 2021

ಹಾದಿಯ ಹುಡುಗ

 

ಬದುಕಿನ ಹಾಳೆಯೇ ಹರಿದು ಹೋದವನಿಗೆ,

ಬದಲಾಗುವ ತಾರೀಖುಗಳ ಚಿಂತೆ ಎಂಥದು?

ಕತ್ತಲನ್ನೇ ಹಾಸಿ-ಹೊದ್ದು ಮಲಗಿದವನಿಗೆ,

ಉದಯಾಸ್ತಮಾನಗಳ ಹಂಗಾದರೂ ಏನು?


ನೋಡುತ್ತಾನೆ, ಯಾವಾಗಲಾದರೊಮ್ಮೆ ಆ ಕಡೆ,

ಅದೆಲ್ಲೋ ದೂರದ ಬೆಳಕಿನ ಕಿಂಡಿಯೆಡೆಗೆ!

ಕಳೆದುಹೋದ ಕನಸೊಂದರ ನಿರೀಕ್ಷಣೆಯಲ್ಲಿ.

ಧೂಳು ಹೊತ್ತ ಗಾಳಿ,ಅವನ ಕಣ್ಣು ಮುಚ್ಚುತ್ತದೆ.


ಹಗಲು ಅಲೆಯುತ್ತಿರುತ್ತಾನೆ ; ನೆಲಕ್ಕೆ ಸುಸ್ತಾಗುವವರೆಗೆ!

ರಾತ್ರಿ ಅಳುತ್ತಿರುತ್ತಾನೆ ; ಚುಕ್ಕಿಗಳು ಉದುರುವವರೆಗೆ!

ಹುಣಸೇಮರದ ಆ ಕುಂಟಗುಬ್ಬಿಯದ್ದು ಒಂದೇ ಕೂಗು..

"ಬಾ ಸಾಯೋಣ..ಸತ್ತು ಬದುಕೋಣ..ಮತ್ತೆ ಸಾಯೋಣ!"





No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...