Sunday 24 October 2021

ಕಾಣುವ ಸತ್ಯ


ಮನಸ್ಸಿನಲ್ಲಿ ಬಂಧಿಯಾದವನಿಗೆ
ಬೇಡಿಯ ಅಗತ್ಯವೇನಿದೆ?
ಎದೆಯಲ್ಲಿ ಕೆಂಡವಿಟ್ಟುಕೊಂಡವನ
ನಗುವಿಗಿರುವ ಅರ್ಥವೇನು?
ಕಂಬನಿಯ ಕಟ್ಟಿದವನೊಬ್ಬ
ಅತ್ತಾದರೂ ಮಾಡುವುದೇನು?
ಇಲ್ಲಿ ಕೈ ಹಿಡಿವವರಿಲ್ಲ ಗೆಳೆಯಾ..
ನಮ್ಮ ಕೈ ನಾವೇ ಹಿಡಿಯಬೇಕು!
ಕಸುವಿರುವ ತನಕ ನಡೆಯಬೇಕು!
ಇಷ್ಟಕ್ಕೂ ಬೋರಲು ಬಿದ್ದರೆ,
ಭೂಮಿಯ ಒಡಲು!
ಅಂಗಾತನೆ ಬಿದ್ದರೆ,ಆಗಸದ ಚುಕ್ಕಿ!
ಕಾಣುವುದಷ್ಟೇ ಸತ್ಯ ಗೆಳೆಯಾ..!
ಕಾಣದಿರುವುದಕ್ಕೆ ಹಂಬಲಿಸಬೇಡ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...