Monday 25 October 2021

ರಕ್ಕಸರು


 

ಈ ಜಗತ್ತಿನಲ್ಲಿ ಎಲ್ಲರಿಗೂ..
ಸಂತರಾಗಿಬಿಡುವ ಹಪಾಹಪಿ!
ಮಹಾತ್ಮರೆನಿಸಿಕೊಳ್ಳುವ ಹಂಬಲ!
ಮನುಷ್ಯರಾಗಲು ಆಸಕ್ತಿಯಿಲ್ಲ..

ಜಗತ್ತಿನಲ್ಲಿ ಎಲ್ಲರಿಗೂ..
ಗಮ್ಯವನ್ನು ತಲುಪುವ ಧಾವಂತ.
ದಾರಿ ಹಿಡಿಯಲಿಕ್ಕೆ ಅವಸರ!
ಹಿಡಿದ ದಾರಿಯ ಬಗ್ಗೆ ಅರಿವಿಲ್ಲ..

ಈ ಜಗತ್ತಿನಲ್ಲಿ ಎಲ್ಲರಿಗೂ..
ಕಿತ್ತುಕೊಳ್ಳುವ ರಕ್ಕಸತನ,
ಕೇಳಿಪಡೆವ ಸೌಜನ್ಯವಿಲ್ಲ..
ಕೊಡುವ ಹೃದಯವಂತೂ ಇಲ್ಲ.

ಈ ಜಗತ್ತಿನಲ್ಲಿ ಎಲ್ಲರಿಗೂ..
ಪ್ರೀತಿಸಿಕೊಳ್ಳುವ ಹುಚ್ಚುತನ,
ಪಡೆವ ಅರ್ಹತೆಯ ಅರಿವಿಲ್ಲ
ಪ್ರೀತಿಸುವ ಬಾಧ್ಯತೆಯೂ ಬೇಕಿಲ್ಲ
.

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...