Monday 25 October 2021

ಬದುಕಿಸಿ ಬಿಡು..


ನಿನಗಾಗಿ ಅಂಗಲಾಚಿದ ಶಿಲೆಯಾಗಿದ್ದೇನೆ

ಕನಿಷ್ಠ ಗೋರಿ ಕಟ್ಟಲಾದರೂ ಬಂದುಬಿಡು " 

ನಿನಗಾಗಿ ಒಣಗಿ ನಿಂತ ಮರವಾಗಿದ್ದೇನೆ,

ಕನಿಷ್ಠ ಸೌದೆಗಾದರೂ ನನ್ನನ್ನು ಕಡಿದುಬಿಡು.

ನಿನಗಾಗಿ ಉದುರಿ ಬಿದ್ದ ಹೂಪಕಳೆಯಾಗಿದ್ದೇನೆ,

ಕನಿಷ್ಠ ಕಸದಲ್ಲಾದರೂ ಎತ್ತಿ ಹಾಕಿಬಿಡು.

ನಿನಗಾಗಿ ಸತ್ತ ಮಾತಿನ ತುಣುಕಾಗಿದ್ದೇನೆ,

ಕನಿಷ್ಠ ಒಂದು ಬೈಗುಳದಿಂದಲಾದರೂ ಬದುಕಿಸಿಬಿಡು!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...