Saturday 23 October 2021

ಅಸಂಗತ ಸ್ವಗತ


 ಸೆರಗು ಕಚ್ಚಿ 

ಅಳುವ ಮುಚ್ಚಿಡುವ

ಅವಳ ಆ ಯತ್ನವನ್ನು

ಈ  ಜಗತ್ತು...

"ಮಾತು"-ಎಂದು ಕರೆಯುತ್ತದೆ!

ಕಂಬನಿಯ ನದಿಗೆ

ನಿಟ್ಟುಸಿರಿನುಪ್ಪು ಕರಗಿಸಿದ

ಅವಳನ್ನು "ಮೌನಿ" ಎನ್ನುತ್ತದೆ!

ಅತ್ತವಳನ್ನು "ಹುಚ್ಚಿ" ಎನ್ನುತ್ತದೆ!

ನಕ್ಕವಳನ್ನು "ವೇಶ್ಯೆ" ಎನ್ನುತ್ತದೆ!

ಕಳೆದುಕೊಂಡವಳನ್ನು "ಹೆಣ" ಎನ್ನುತ್ತದೆ!

ಆರಡಿಯ ಗುಂಡಿಗೆ ತಳ್ಳುತ್ತದೆ ಜಗತ್ತು..

ಮಣ್ಣು ಮುಚ್ಚಿ , "ಭೂಮಿ"ಎನ್ನುತ್ತದೆ!

ಹೊಟ್ಟೆಯೊಳಗಿನ ಕೂಸು ಮಾತ್ರವೇ

ಅವಳನ್ನು "ಅಮ್ಮ" ಎಂದು ತಬ್ಬುತ್ತದೆ!





No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...