Monday 25 October 2021

ಒಲವೇಕೆ ಅಷ್ಟು ನವಿರು?

ದೂರದ ಮೇಲೆ... 

ನನ್ನ ಯಾವ ದೂರುಗಳೂ ಇಲ್ಲ.


ಕಾಲದ ಬಗೆಗಿನ ನನ್ನ ಜಗಳ...

ಈ ಜನ್ಮದಲ್ಲಿ ಮುಗಿಯುವುದೂ ಇಲ್ಲ.

ಈ ನಿಸರ್ಗ ಸಾಯುವುದೂ ಇಲ್ಲ.

ಆ ಕಾಲಕ್ಕೆ ವಯಸ್ಸೂ ಆಗುವುದಿಲ್ಲ.

ಮಾತುಗಳು ಮಾತ್ರವೇ ಸಾಯುತ್ತಿವೆ.

ಮೌನಕ್ಕೆ ಮುಪ್ಪಡರಿಬಿಟ್ಟಿದೆ.

ಆ ಹುಣಸೇಮರದ ಕುಂಟಗುಬ್ಬಿಯನ್ನು

ನಿನ್ನೆ ರಾತ್ರಿ ತಡೆಯಲಾರದೆ ಕೇಳಿಬಿಟ್ಟೆ...

"ಒಲವೇಕೆ ಇಷ್ಟೊಂದು ನವಿರು?"


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...