ಬದುಕ ಎಲೆಯ ಮೇಲೆ,
ನಗುವಿನ ಇಬ್ಬನಿಯುದುರುವುದು
ಮುಂಜಾನೆ ಒಂದೆರಡು ಕ್ಷಣವಷ್ಟೇ!!
ಈ ಮಳೆಗಾಲದಲ್ಲೂ ಬಿರುಬಿಸಿಲು,
ಹಗಲಿಡೀ ನೋವಿನ ಬಾಷ್ಪವಿಸರ್ಜನೆ!
ನೋವೆಂಬ ನೋವಿನ ಸಾನಿಧ್ಯದಲ್ಲಿಯೇ
ದ್ಯುತಿ ಸಂಶ್ಲೇಷಣೆಯಾಗಿ ಉಸಿರಾಡಲು
ಏನೋ ಒಂದಷ್ಟು ಶಕ್ತಿ ಸಂಚಯವಾದೀತು!
ರಾತ್ರಿಗಳೋ..ಭೂಮಿಗಿಳಿದ ಬೇರುಗಳೊಂದಿಗೆ!
ಗತದ ಕಸವ ಬೇರಿಗುಣಿಸುತ್ತಾ..
ಅರ್ಧ ಸತ್ತ ಕನಸುಗಳನೆಣಿಸುತ್ತಾ..
ಬೆಳೆವುದ ನಿಲ್ಲಿಸಿದ,ಬದುಕಿನ ಕಾಂಡಕ್ಕೆ
ಕಂಬನಿಯ ನೀರು,ನಿಟ್ಟುಸಿರ ಗಾಳಿ ಹಾಕಿ,
ಬದುಕಿಗಾಗಿ ಚಿಗುರುವ,ಸಾಯಲಿಕ್ಕಾಗಿ ಬೆಳೆಯುವ
ಬಗೆಯನ್ನು ನೋಡುತ್ತ ಕೂರುವುದಿದೆಯಲ್ಲಾ..
ಬಹುಶಃ..ಅದೇ ಬದುಕಿನ ಮೋಕ್ಷವಾ? ಗೊತ್ತಿಲ್ಲ!
Monday, 25 October 2021
ಮೋಕ್ಷ
Subscribe to:
Post Comments (Atom)
"ಹಿ.ಮ.ನಾ. ರವರ ಬಗ್ಗೆ.
ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...
-
ಕೋವಿಡ್ ನ ಈ ದುರಿತಕಾಲದಲ್ಲಿ ಗುಳೆ-ವಲಸೆ,ಹಸಿವು,ಸಾವು ಎಂಬೆಲ್ಲಾ ಶಬ್ಧಗಳನ್ನು ಕೇಳಿದಾಗ ಆಯಾಚಿತವಾಗಿ ಬಸವಣ್ಣ ನೆನಪಾಗಿಬಿಡುತ್ತಾನೆ. ಅವನ ಸಮಾಜವಾದೀ ಸಮಸಮಾಜದ ಕಲ್ಪನೆ...
-
ನಾವು ಬೆಳಕು ಬಿತ್ತದೇ ಬೆಳಕು ಬೆಳೆಯಬಲ್ಲೆವು ಎಂದು ನಂಬಿದವರು. ಬೆಳಕೆಂದರೆ ವೇಗ, ಬೆಳಕೆಂದರೆ ಬೆತ್ತಲೆ, ಬೆಳಕೆಂದರೆ ವ್ಯಾಮೋಹ, ಬೆಳಕೆಂದರೆ ಕ್ರೌರ್ಯ. ಬೆಳಕಿನಲ್ಲೇ ಕತ್...
-
ಬ ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ. ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ ...

No comments:
Post a Comment