Monday 25 October 2021

ಮೋಕ್ಷ


 

ಬದುಕ ಎಲೆಯ ಮೇಲೆ,
ನಗುವಿನ ಇಬ್ಬನಿಯುದುರುವುದು
ಮುಂಜಾನೆ ಒಂದೆರಡು ಕ್ಷಣವಷ್ಟೇ!!
ಈ ಮಳೆಗಾಲದಲ್ಲೂ ಬಿರುಬಿಸಿಲು,
ಹಗಲಿಡೀ ನೋವಿನ ಬಾಷ್ಪವಿಸರ್ಜನೆ!
ನೋವೆಂಬ ನೋವಿನ ಸಾನಿಧ್ಯದಲ್ಲಿಯೇ
ದ್ಯುತಿ ಸಂಶ್ಲೇಷಣೆಯಾಗಿ ಉಸಿರಾಡಲು
ಏನೋ ಒಂದಷ್ಟು ಶಕ್ತಿ ಸಂಚಯವಾದೀತು!
ರಾತ್ರಿಗಳೋ..ಭೂಮಿಗಿಳಿದ ಬೇರುಗಳೊಂದಿಗೆ!
ಗತದ ಕಸವ ಬೇರಿಗುಣಿಸುತ್ತಾ..
ಅರ್ಧ ಸತ್ತ ಕನಸುಗಳನೆಣಿಸುತ್ತಾ..
ಬೆಳೆವುದ ನಿಲ್ಲಿಸಿದ,ಬದುಕಿನ ಕಾಂಡಕ್ಕೆ
ಕಂಬನಿಯ ನೀರು,ನಿಟ್ಟುಸಿರ ಗಾಳಿ ಹಾಕಿ,
ಬದುಕಿಗಾಗಿ ಚಿಗುರುವ,ಸಾಯಲಿಕ್ಕಾಗಿ ಬೆಳೆಯುವ
ಬಗೆಯನ್ನು ನೋಡುತ್ತ ಕೂರುವುದಿದೆಯಲ್ಲಾ..
ಬಹುಶಃ..ಅದೇ ಬದುಕಿನ ಮೋಕ್ಷವಾ? ಗೊತ್ತಿಲ್ಲ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...