Sunday 24 October 2021

ಪ್ರಾರ್ಥಿಸು...


ಪ್ರಾರ್ಥಿಸು..
ಮಂಡಿಯೂರಿ,ಬೊಗಸೆಯೊಡ್ಡಿ

ಮುಗಿಲೆಡೆ ಕಣ್ಣನೆಟ್ಟು ಒಮ್ಮೆ ;
ನಿನಗೆ ಬೇಕಾದುದನ್ನೆಲ್ಲಾ
ದಕ್ಕಿಸಿಕೊಳ್ಳುವುದಕ್ಕಲ್ಲ.!
ನಿನ್ನ ಇಡೀ ಮನಸ್ಸನ್ನು
ತೊಳೆದು ಶುಭ್ರಗೊಳಿಸಿಕೊಳ್ಳುವುದಕ್ಕೆ!
ನಿನ್ನ ಬೇಕುಗಳೆಲ್ಲವನ್ನೂ
ಬೇಡಗಳನ್ನಾಗಿಸಿಕೊಳ್ಳುವುದಕ್ಕೆ!
ಮತ್ತೆ..ಈಗ ಮಂಡಿಯೂರು.
ಮುಗಿಲೆಡೆ,ನಿನ್ನ ಕಣ್ಣು ನೆಡು
ಕಣ್ಣೀರಿಗೆ ಮೇಲಿರುವವನು ತೋಯಬೇಕಿದೆ!
ಎದೆಯ ಬೆಂಕಿಗೆ ಅವನೂ ಸಾಯಬೇಕಿದೆ!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...