Thursday 28 October 2021

ಬೆಂಕಿ


ಬೆಳಕಿನಲ್ಲಿದ್ದವರು

ಬೆಂಕಿ ಹಚ್ಚುತ್ತಿದ್ದಾರೆ

ಕತ್ತಲಲ್ಲಿದ್ದವರು

ಹಣತೆಗಾಗಿ ತಡವರಿಸುತ್ತಿದ್ದಾರೆ!

ಬೆಳಕಿಗೆ ಕತ್ತಲೆಯೇ

ಉರುವಲು ತಾನೇ?

ಕತ್ತಲು ಉರಿದು ಬೂದಿಯಾಗಿ

ಬೆಳಕನ್ನು ಮೆರೆಸುತ್ತದೆ.

ತಾನು ಮಂಕಾಗಿ ಮರುಗುತ್ತದೆ.


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...