Sunday 24 October 2021

ನೀನು ಮಾತ್ರವೇ ಇರಬೇಕು!

ನನ್ನ ತನುವಿನೊಳಗೆ ಕರಗಿಬಿಡು.

ನನ್ನ ಎದೆಯ ಕೊಳದಲ್ಲಿ ಮುಳುಗಿಬಿಡು.

ನನ್ನ ಮನಸ್ಸೆಂಬ ಗಾಳಿಯಲ್ಲಿ ಹಾರಿಬಿಡು.

ಅಲ್ಲಿ ದೇಹದ ಲವಲೇಶವೂ ಇರಬಾರದು..

ನೆನಪು,ಪುಣ್ಯ-ಪಾಪಗಳ ಕರ್ಮದ ಸಹಿತ..

ನೀನು ಬಂದುಹೋದ ಗುರುತು ಕೂಡ..

ಜೀವವೂ ಕೂಡ ಶಾಶ್ವತವಾಗಿ ಇಲ್ಲವಾಗಬೇಕು.

ಪುನರ್ಜನ್ಮ ,ಮೋಕ್ಷಗಳ ಕೈಗೂ ಸಿಗದಂತೆ!

ಅಲ್ಲಿ ...


ನೀನು ಮಾತ್ರವೇ ಇರಬೇಕು,ಕಾಲದಾಚೆಯವರೆಗೂ!!

ಕೇಳು ...

ಮತ್ತೊಮ್ಮೆ..ಕೈ ಬಿಡಬೇಡ; ಕೊರಳ ಚಾಚುವವರೆಗೂ!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...