Monday 25 October 2021

ಬಿತ್ತಿಕೋ...


ಮಾತುಗಳ ಕೋಟೆ ಬೇಧಿಸಿ
ಮೌನ ಹೆಕ್ಕುವ ಕಲೆಗಾರಿಕೆ..
ಮೌನದ ಮೆತ್ತನೆಯ ನೆಲದಲ್ಲಿ
ನಿನ್ನ ಮಾತುಗಳ ಬಿತ್ತುವ ಕುಶಲತೆ..
ಮಾತುಗಳನ್ನೇ ಹುಲುಸಾಗಿ ಬೆಳೆಸಿ
ಕುಯ್ದು ರಾಶಿಯೊಟ್ಟುವ ದಕ್ಷತೆ..
ಅರೇ..ನನ್ನ ಬಂಜರು ಎದೆಯಲ್ಲೂ
ಅದೆಂತಹಾ ಬೆಳೆ ತೆಗೆದೆಯಲ್ಲವೇ ನೀನು?
ಭೂಮಾಲೀಕನಲ್ಲವೇ ನಾನು? ಗೇಣಿ ನೀನು!
ಅದಿರಲಿ,ಹಿಂದಿನ ವರ್ಷದ ಗೇಣಿ ಬಾಕಿ
ಈ ವರ್ಷದಕ್ಕೆ ಸೇರಿಸಿ ಕೊಟ್ಟುಬಿಡು.
ಏನಾದರೂ ಬಿತ್ತಿಕೋ..ಬೆಳೆದುಕೋ!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...